ಹಿಲಿಯಾಣ: 3.20ಲಕ್ಷ ರೂ. ನಗದು ಸಹಿತ ಚಿನ್ನಾಭರಣ ಕಳವು

Update: 2019-09-18 16:54 GMT

ಶಂಕರನಾರಾಯಣ, ಸೆ.18: ಹಿಲಿಯಾಣ ಗ್ರಾಮದ ಕಾನಾಡಿ ಎಂಬಲ್ಲಿ ಸೆ.17ರಂದು ಬೆಳಗ್ಗೆ 11:30ರಿಂದ ಮಧ್ಯಾಹ್ನ 2:30ರ ಮಧ್ಯಾವಧಿಯಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ನಗದು ಸಹಿತ ಚಿನ್ನಾಭರಣ ಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಕಾನಾಡಿಯ ಶಂಕರ ಆಚಾರ್ಯ ಎಂಬವರ ಮನೆಯ ಅಡುಗೆ ಕೋಣೆಯ ಹೆಂಚುಗಳನ್ನು ತೆಗೆದು ಒಳನುಗ್ಗಿದ ಕಳ್ಳರು, ಮನೆಯ ಛಾವಡಿಯ ಗೋಡೆ ಯಲ್ಲಿ ಕೊರೆದು ಮಾಡಿದ ಸಣ್ಣ ಮರದ ಬಾಕ್ಸ್‌ನಲ್ಲಿ ಇರಿಸಿದ್ದ 3,20,000ರೂ. ನಗದು ಮತ್ತು ಮನೆಯ ಮಲಗುವ ಕೋಣೆಯ ಗೊಡ್ರೇಜ್ ಕಪಾಟಿನಲ್ಲಿ ಇರಿಸಿದ್ದ ಎರಡು ಚಿನ್ನದ ಉಂಗುರ, ಚಿನ್ನದ ಚೈನ್ ಕಳವುಗೈದಿದ್ದಾರೆ. ಇವುಗಳ ಒಟ್ಟು ವೌಲ್ಯ 3,72,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News