×
Ad

ಮಂದಾರದ ತ್ಯಾಜ್ಯರಾಶಿಯಿಂದ ನಿರ್ವಸಿತರಾದ ನಿವಾಸಿಗಳಿಗೆ ರೆಡ್‌ಕ್ರಾಸ್‌ನಿಂದ ದಿನಬಳಕೆ ವಸ್ತುಗಳ ಕೊಡುಗೆ

Update: 2019-09-18 23:41 IST

ಮಂಗಳೂರು: ಮಂದಾರದ ತ್ಯಾಜ್ಯರಾಶಿಯಿಂದ ನಿರ್ವಸಿತರಾದ ನಿವಾಸಿಗಳು ಸದ್ಯ ಕುಲಶೇಖರದ ಬೈತುರ್ಲಿಯಲ್ಲಿ ಆಶ್ರಯ ಪಡೆದಿದ್ದು, ಅವರಿಗೆ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ವತಿಯಿಂದ ಬುಧವಾರ ದಿನಬಳಕೆ ವಸ್ತುಗಳನ್ನು ನೀಡಲಾಯಿತು.

27 ಕುಟುಂಬಗಳಿಗೆ ಪ್ರತ್ಯೇಕವಾಗಿ ಕುಕ್ಕರ್, ಬಟ್ಟಲು ಸೇರಿದಂತೆ ಅಡುಗೆ ಕಿಟ್ ಹಾಗೂ ಅಕ್ಕಿ, ಬೇಳೆ, ಟೀ ಪೌಡರ್ ಸೇರಿದಂತೆ ದಿನಬಳಕೆ ವಸ್ತುಗಳನ್ನು ನೀಡಲಾಯಿತು. ರೆಡ್‌ಕ್ರಾಸ್ ಪ್ರಮುಖರಾದ ಪ್ರಭಾಕರ ಶರ್ಮ, ಸಿಎ ಶಾಂತಾರಾಮ ಶೆಟ್ಟಿ, ರವೀಂದ್ರನಾಥ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. ಮಂಗಳೂರು ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಜತೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News