ಹಿದಾಯತ್ ನಗರ, ಅಂಗರಗುಂಡಿಯಲ್ಲಿ ಎಸೆಸ್ಸೆಫ್ ಧ್ವಜ ದಿನಾಚರಣೆ

Update: 2019-09-19 12:28 GMT

ಮಂಗಳೂರು: ಕೋಟೆಕಾರ್ ಸಮೀಪದ ಹಿದಾಯತ್‌ನಗರ ಎಸೆಸ್ಸೆಫ್ ಶಾಖೆಯ ವತಿಯಿಂದ ಎಸ್ಸೆಸ್ಸೆಫ್ 31ನೇ ಧ್ವಜ ದಿನಾಚರಣೆಯು ಗುರುವಾರ ಜರುಗಿತು.

ಎಸೆಸ್ಸೆಫ್ ಅಧ್ಯಕ್ಷ ಹಾಜಿ ಉಮರ್ ಮಾಸ್ಟರ್ ಮಾತನಾಡಿದರು. ಮಸೀದಿಯ ಖತೀಬ್ ಅಹ್ಮದ್ ಕಬೀರ್ ಸಅದಿ ಉಳ್ಳಾಲ, ಮದ್ರಸದ ಸದರ್ ಯು.ಎ ಅಬ್ದುಲ್ ಅಝೀಝ್ ಸಖಾಫಿ, ಎಸೆಸ್ಸೆಫ್ ಪದಾಧಿಕಾರಿಗಳಾದ ಶಬೀರ್ ಅಶ್‌ಅರಿ, ಝುಬೈರ್ ಝುಹ್ರಿ, ಮದ್ರಸದ ಮುಅಲ್ಲಿಮರಾದ ಅಶ್ರಫ್ ಅಮ್ಜದಿ, ಯೂಸುಫ್ ಸಖಾಫಿ, ಮಸೀದಿಯ ಕಾರ್ಯದರ್ಶಿ ರಾಝಿನ್, ಸದಸ್ಯ ಅಬ್ದುಲ್ ಸಲಾಂ ಹಫೀಝ್ ಮತ್ತಿತರರು ಪಾಲ್ಗೊಂಡಿದ್ದರು.

ಎಸೆಸ್ಸೆಫ್  ಅಂಗರಗುಂಡಿ

ಎಸೆಸ್ಸೆಫ್ ಬೈಕಂಪಾಡಿ ಅಂಗರಗುಂಡಿ ಘಟಕದ ವತಿಯಿಂದ ಗುರುವಾರ ಅಂಗರಗುಂಡಿ ಬದ್ರಿಯಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡ ಬಿ.ಕೆ. ಇಬ್ರಾಹಿಂ ಧ್ವಜಾರೋಹಣಗೈದರು.

ಅಂಗರಗುಂಡಿ ಮದ್ರಸದ ಸದರ್ ಯಾಹ್ಯಾ ಸಖಾಫಿ ಕಕ್ಕಿಂಜೆ ಮಾತಮಾಡಿದರು. ಸುನ್ನಿ ಯುವಜನ ಸಂಘದ ಅಧ್ಯಕ್ಷ ಹೈದರ್, ಸ್ಥಳೀಯದಾರ ಬಾವಾ, ಇಕ್ಬಾಲ್, ಲತೀಫ್ ಮತ್ತಿತರರು ಉಪಸ್ಥಿತರಿದ್ದರು. ಎಸ್‌ವೈಎಸ್ ಕಾರ್ಯದರ್ಶಿ ಇಲ್ಯಾಸ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News