ತುಳು ನಾಟಕ ಕಲಾವಿದರ ಒಕ್ಕೂಟಕ್ಕೆ ಆಯ್ಕೆ

Update: 2019-09-19 12:40 GMT

ಮಂಗಳೂರು, ಸೆ.19: ತುಳು ನಾಟಕ ಕಲಾವಿದರ ಒಕ್ಕೂಟ ಮಂಗಳೂರು ಇದರ 2018-2019ನೇ ಸಾಲಿನ ವಾರ್ಷಿಕ ಮಹಾಸಭೆಯು ನಗರದ ಕದ್ರಿ ಗೋಕುಲ್ ಸಭಾಭವನದಲ್ಲಿ ಇತ್ತೀಚೆಗೆ ಜರುಗಿತು. 2019-21ನೇ ಸಾಲಿನ ಅವಧಿಗೆ ಅಧ್ಯಕ್ಷರಾಗಿ ಲ.ಕಿಶೋರ್ ಡಿ ಶೆಟ್ಟಿ ಪುರನಾಯ್ಕೆಗೊಂಡರು.

ಉಪಾಧ್ಯಕ್ಷರಾಗಿ ಗೋಕುಲ್ ಕದ್ರಿ,ಎ. ಶಿವಾನಂದ ಕರ್ಕೇರಾ ಮತ್ತು ವಸಂತಿ ಜೆ. ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮಣ ಕುಮಾರ್ ಮಲ್ಲೂರು, ಜತೆ ಕಾರ್ಯದರ್ಶಿಗಳಾಗಿ ದಿನೇಶ್ ಕುಂಪಲ, ಶೋಭಾ ಶೆಟ್ಟಿ, ತಾರಾನಾಥ ಉರ್ವಾ, ಕೋಶಾಧಿಕಾರಿಯಾಗಿ ಮೋಹನ್ ಕೊಪ್ಪಳ ಕದ್ರಿ, ಕ್ಷೇಮನಿಧಿಯ ಪ್ರಧಾನ ಸಂಚಾಲಕರಾಗಿ ಪ್ರದೀಪ್ ಆಳ್ವ, ಸಂಚಾಲಕರಾಗಿ ರಾಘವೇಂದ್ರ ರಾವ್ ಶರವು, ಸಲಹೆಗಾರರಾಗಿ ಶಶಿಧರ ಶೆಟ್ಟಿ ನಿಟ್ಟೆ, ತಾರಾನಾಥ ಶೆಟ್ಟಿ ಬೋಳಾರ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಂಜೀವ ಅಡ್ಯಾರ್, ರಾಜೀವ ಶೆಟ್ಟಿ ಸಲ್ಲಾಜೆ, ನಾಗೇಶ್ ದೇವಾಡಿಗ ಕದ್ರಿ, ಮೋಹನ್ ಬೋಳಾರ, ಶೇಖರ ಶೆಟ್ಟಿ ಹೊಗೆಬೈಲು, ಅಶ್ವಿನಿ ರೈ, ನಿರ್ಮಲಾ ಶೆಟ್ಟಿ, ಮನೋಜ್ ಅತ್ತಾವರ್, ದೀನನಾಥ ಶೆಟ್ಟಿ, ಜೀವನ್ ಉಳ್ಳಾಲ್, ಕ್ಯಾಲಿ ಡಿ.ಎಸ್, ದಿನೇಶ್ ಅತ್ತಾವರ್, ರಂಜನ್ ಬೋಳೂರು, ಇಂದು ಶೇಖರ್, ಕಮಲಾಕ್ಷ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News