×
Ad

ಮುರ್ಡೇಶ್ವರದಲ್ಲಿರುವ ಅನಧಿಕೃತ ಗೂಡಾಂಗಡಿ ತೆರವು ಕಾರ್ಯಾಚರಣೆ

Update: 2019-09-19 18:38 IST

ಭಟ್ಕಳ: ಜಿಲ್ಲಾ ಕಾರ್ಯನಿರ್ವಹಣಾಧಿಕಾರಿಗಳ ಆದೇಶದ ಮೇರೆಗೆ ಮುರ್ಡೇಶ್ವರದಲ್ಲಿರುವ ಅನಧಿಕೃತ ಗೂಡಾಂಗಡಿ ತೆರವುಗೊಳಿಸಲು ಸ್ಥಳಕ್ಕೆ ತೆರಳಿದ ಕಂದಾಯ ಅಧಿಕಾರಿಗಳು ವ್ಯಾಪಾರಿಗಳ ವಿರೋಧದ ನಡುವೆ ತಹಶೀಲ್ದಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಅಂಗಡಿಗಳನ್ನು ತೆರವುಗೊಳಿಸಲಾಯಿತು.

ಮುರ್ಡೇಶ್ವರದ ಪುಷ್ಕರಣಿಯ ಭಾಗದಲ್ಲಿನ ಅನಧಿಕೃತ ಗೂಡಂಗಡಿ ತೆರವು ಮಾಡಲು ಕಂದಾಯ ಇಲಾಖಾಧಿಕಾರಿಗಳು ಸೂಚನೆ ನೀಡಿದ್ದರು ತೆರವುಗೊಳಿಸದೆ ಇದ್ದರಿಂದ ಇಂದು ಪೊಲೀಸ್ ಬಿಗಿ ಬಂದೋಬಸ್ತ್ ಮೂಲಕ ತೆರವುಗೊಳಿಸಿ ಗೂಡಂಗಡಿಕಾರರು ಕೆಲ ಸಮಯ ಗೊಂದಲ ಮಯ ವಾತಾವರಣ ಏರ್ಪಡಿಸಿ 1981ರಿಂದಲೂ ಕಂದಾಯ ಇಲಾಖೆಗೆ ನಾವು ದಂಡ ಕಟ್ಟಿಕೊಂಡು ಸಣ್ಣ ಪುಟ್ಟ ಅಂಗಡಿ ಮುಂಗಟ್ಟು ನಡೆಸಿಕೊಂಡು ಜೀವನ ಸಾಗಿಸುತ್ತಾ ಬಂದಿರುತ್ತೇವೆ, ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಿ ನಾವೆ ಖುದ್ದಾಗಿ ಅಂಗಡಿಗಳನ್ನು ಸ್ಥಳಾಂತರ ಪಡಿಸುತ್ತೇವೆ. 25 ರಿಂದ 30 ವರ್ಷಗಳ ಹಿಂದಿನಿಂದ ಈ ಅಂಗಡಿಗಳಿಂದ ಜೀವನ ನಿರ್ವಹಿಸುತ್ತಾ ಬಂದಿದ್ದೇವೆ, ರಸ್ತೆ ಅಗಲೀಕರಣಕ್ಕೆ ಎಷ್ಟೂ ಜಾಗದ ಅವಶ್ಯಕತೆ ಇದೆಯೋ ಅಷ್ಟನ್ನೂ ಬಿಟ್ಟು ಕೊಡುತ್ತೇವೆ ಎಂದು ಪಟ್ಟು ಹಿಡಿದರು.

ಈ ಸಮಯದಲ್ಲಿ ಅಂಗಡಿಕಾರರನ್ನು ಉದ್ದೇಶಿಸಿ ಮಾತನಾಡಿದ ತಹಶೀಲ್ದಾರ್ ವಿ.ಪಿ. ಕೊಟ್ರಳ್ಳಿ ಇದು ಕಂದಾಯ ಇಲಾಖೆಯ ಆಸ್ತಿಯಾಗಿದ್ದು, ರಸ್ತೆಗೆ ಅನುಕೂಲ ಮಾಡಿಕೊಳ್ಳುವ ಉದ್ದೇಶದಿಂದ ತೆರವುಗೊಳಿಸಲು ಮಾನ್ಯ ಸಹಾಯಕ ಆಯುಕ್ತರು ಭಟ್ಕಳ , ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಕಾರವಾರ, ಈಗಾಗಲೇ ಸಭೆಗಳನ್ನು ನಡೆಸಿ ತೀರ್ಮಾನ ಕೈಗೊಂಡು ಮುರ್ಡೇಶ್ವರ ಗ್ರಾಮದ ಅಂದವನ್ನು ಹೆಚ್ಚಿಸುವ ಉದ್ದೇಶಕ್ಕಾಗಿ ಸರಕಾರದ ಆಸ್ತಿಯನ್ನು ಅತಿಕೃಮಣ ಮಾಡಿದ ಗೂಡಂಗಡಿಗಳನ್ನು  ನ್ಯಾಯಾಲಯದ ಆದೇಶಕ್ಕೆ ಯಾವುದೇ ತೊಡಕಾಗದೆ ಹಂತ ಹಂತವಾಗಿ ಎಲ್ಲಾ ಅನಧಿಕೃತ ಜಾಗಗಳನ್ನು ತೆರವುಗೊಳಿಸುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News