ಖೋಟಾನೋಟು ಪ್ರಕರಣ: ಆರೋಪಿಗಳು ಪೊಲೀಸ್ ಕಸ್ಟಡಿಗೆ

Update: 2019-09-19 15:55 GMT

ಕಾರ್ಕಳ, ಸೆ.18: ಖೋಟಾನೋಟು ಪ್ರಕರಣದಲ್ಲಿ ಬಂಧಿಸಲ್ಪಟ್ಟ ಆರೋಪಿ ಗಳಾದ ದಾವಣಗೆರೆ ಜಿಲ್ಲೆಯ ದೊಡ್ಡಬಾತಿ ಗ್ರಾಮದ ಚೇತನ್ ಗೌಡ(23) ಹಾಗೂ ಚೆನ್ನಗಿರಿ ನಿವಾಸಿ ಅರ್ಪಿತಾ ನವಲೆ(22) ಎಂಬವರನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಗುರುವಾರ ಸಂಜೆ ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

 ಇವರಲ್ಲಿ ಚೇತನ್ ಗೌಡಗೆ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿ ಹಾಗೂ ಅರ್ಪಿತಾ ನವಲೆಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ. ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಶೋಕಿ ಗಾಗಿ ಈ ದಂಧೆ ನಡೆಸುತ್ತಿದ್ದರೆನ್ನಲಾಗಿದೆ.

ಇವರ ದಾವಣಗೆರೆಯ ರೂಮಿನಲ್ಲಿ ಪ್ರಿಂಟಿಂಗ್ ಮೆಶಿನ್ ಇಟ್ಟು ಖೋಟಾ ನೋಟು ತಯಾರಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದ್ದು, ಅದ ರಂತೆ ಪೊಲೀಸ್ ತಂಡ ಆರೋಪಿಯೊಂದಿಗೆ ನಾಳೆ ದಾವಣಗೆರೆಗೆ ತೆರಳಿ ಹೆಚ್ಚಿನ ತನಿಖೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News