ಕೋಟ: ಮೀನುಗಾರ ಆತ್ಮಹತ್ಯೆ

Update: 2019-09-20 17:01 GMT

ಕೋಟ, ಸೆ.20: ಪ್ರಾಕೃತಿಕ ವಿಕೋಪದ ಕಾರಣ ಮೀನುಗಾರಿಕೆ ಕೆಲಸವಿಲ್ಲದೇ, ಹಿಂದೆ ಮಾಡಿದ ಕೈಸಾಲ ತೀರಿಸಲು ಸಾಧ್ಯವಾಗದ ಚಿಂತೆಯಲ್ಲಿ ಮೀನುಗಾರರೊಬ್ಬರು ತನ್ನ ಮನೆಯ ಕೋಣೆಯಲ್ಲಿ ಶುಕ್ರವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟತಟ್ಟು ಗ್ರಾಮದ ಪಡುಕೆರೆ ಎಂಬಲ್ಲಿಂದ ವರದಿಯಾಗಿದೆ.

ಮೃತರನ್ನು ಇಲ್ಲಿನ ನೇತ್ರಾವತಿ ನಿಲಯದ ದೇವ ಬಂಗೇರ (50) ಎಂದು ಗುರುತಿಸಲಾಗಿದೆ. ಇವರು ಬೋಟ್‌ನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು, ಮೀನುಗಾರಿಕೆಗೆ ಸಂಬಂಧಿಸಿದಂತೆ ಸಲಕರಣೆ ಖರೀದಿಗೆ ಹಾಗೂ ಇತರ ಖರ್ಚಿಗಾಗಿ ಸ್ಥಳೀಯರಲ್ಲಿ ಸಾಲ ಮಾಡಿಕೊಂಡಿದ್ದರೆನ್ನಲಾಗಿದೆ.

ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News