ಮೂಡುಬಿದಿರೆ: ಸನ್ವಿತ್‍ಗೆ 'ಕರ್ನಾಟಕ ಸೌರಭ ರತ್ನ' ಪ್ರಶಸ್ತಿ

Update: 2019-09-20 18:00 GMT

ಮೂಡುಬಿದಿರೆ: ಕಿನ್ನಿಗೋಳಿಯ ಯುಗಪುರುಷ ಸಭಾಂಗಣದಲ್ಲಿ ನಡೆದ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಹುಮುಖ ಪ್ರತಿಭೆಯ ಬಾಲಕಲಾವಿದ ಸನ್ವಿತ್ ಕುಲಾಲ್‍ಗೆ 'ಕರ್ನಾಟಕ ಸೌರಭ ರತ್ನ' ರಾಜ್ಯ  ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಉತ್ತಮ ನೃತ್ಯಪಟುವಾಗಿರುವ ಈತ ಚಿಕ್ಕ ವಯಸ್ಸಿನಲ್ಲೆ ಕನ್ನಡ ,ಮತ್ತು ತುಳುಚಲನಚಿತ್ರದಲ್ಲಿ ನಟಿಸಿ ಗಮನಸೆಳೆದಿದ್ದಾನೆ. ತನ್ನ ಪ್ರತಿಭೆಗೆ ಅನೇಕ ಪ್ರಶಸ್ತಿಗಳನ್ನು ಪಡಕೊಂಡಿದ್ದಾನೆ. ಇಲ್ಲಿನ ಕಾರ್ಮೆಲ್ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿಯಾಗಿರುವ ಈತ ಕೋಟೆಬಾಗಿಲಿನ ಸತೀಶ್ ಕುಲಾಲ್- ಪವಿತ್ರ ದಂಪತಿಯ ಪುತ್ರ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News