ಮಂಗಳೂರು: ರಶೀದ್ ವಿಟ್ಲ ಅವರಿಗೆ ಸನ್ಮಾನ

Update: 2019-09-21 17:26 GMT

ಮಂಗಳೂರು: ಜನಪರ ಹಾಗೂ ಜೀವಕಾರುಣ್ಯ ಸಮಾಜ ಸೇವೆಯನ್ನು ಗುರುತಿಸಿ ರಶೀದ್ ವಿಟ್ಲ ಅವರನ್ನು ಮಂಗಳೂರು ಸಾಹಿತ್ಯಾಸಕ್ತರ ಬಳಗ ಶನಿವಾರ ಮಂಗಳೂರಿನಲ್ಲಿ 'ಪಿವೋಟ್ ಪದ್ಯಗಳು' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸನ್ಮಾನಿಸಿತು. 

ಮಂಗಳೂರು ವಿ.ವಿ. ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಪ್ರೊ| ಪಟ್ಟಾಭಿರಾಮ ಸೋಮಯಾಜಿ, ಬೆಂಗಳೂರು ರಾಜ್ ನ್ಯೂಸ್ ಚಾನೆಲ್ ನಿರ್ಮಾಪಕ ರಾ.ಚಿಂತನ್, ಲೇಖಕಿ ನಜ್ಮಾ ನಝೀರ್ ಚಿಕ್ಕನೇರಳೆ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರರಾದ ಯು.ಟಿ. ಆಯಿಷಾ ಫರ್ಝಾನಾ, ಇಸ್ಮಾಯಿಲ್ ಕರ್ವೇಲ್, ಯು.ಟಿ.ಇರ್ಶಾದ್, ಶರೀಫ್ ವಳಾಲ್ ಉಪ್ಪಿನಂಗಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News