ಮುಖ್ಯಮಂತ್ರಿಯ ಪರಿಹಾರ ನಿಧಿಯ ಚೆಕ್ ಹಸ್ತಾಂತರ

Update: 2019-09-21 17:34 GMT

ಮಂಗಳೂರು, ಸೆ.21: ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿಯ ಪರಿಹಾರ ನಿಧಿಯಿಂದ ಮಂಜೂರಾದ 2,29,339 ರೂ.ಮೊತ್ತದ ಚೆಕ್‌ಗಳನ್ನು ವಿವಿಧ ಕಾಯಿಲೆಯಿಂದ ಬಳಲುವ 6 ಮಂದಿಗೆ ಹಸ್ತಾಂತರಿಸಲಾಯಿತು.

ಉಳ್ಳಾಲದ ಸೌಮ್ಯಾರಿಗೆ 70,423 ರೂ., ಸುಳ್ಯದ ಯು.ಎಂ.ರಾಮರಿಗೆ 56,000, ತೆಂಕ ಉಳಿಪಾಡಿಯ ಮಿಕ್ವಾದ್‌ಗೆ 36,346 ರೂ., ಬೆಳ್ತಂಗಡಿಯ ಸೇಸುಗೆ 31,570, ಅಡ್ಯಾರ್‌ನ ಅಬ್ದುಲ್ ಖಾದರ್‌ಗೆ 20,000 ರೂ., ಸುಳ್ಯದ ಅಬೂಬಕರ್‌ಗೆ 15,000 ರೂ. ಮೊತ್ತದ ಚೆಕ್ಕನ್ನು ಐವನ್ ಡಿಸೋಜ ಮನಪಾದಲ್ಲಿರುವ ತನ್ನ ಕಚೇರಿಯಲ್ಲಿ ಹಸ್ತಾಂತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News