ಪುತ್ತೂರು ಉಪವಿಭಾಗಾಧಿಕಾರಿಗೆ ಮುಂಬಡ್ತಿ

Update: 2019-09-22 12:21 GMT

ಪುತ್ತೂರು: ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ಹೆಚ್.ಕೆ. ಕೃಷ್ಣಮೂರ್ತಿ ಅವರಿಗೆ ಸರಕಾರ ಮುಂಬಡ್ತಿ ನೀಡಿದೆ.

ಕೆಎಎಸ್ ಅಧಿಕಾರಿಯಾಗಿರುವ ಕೃಷ್ಣಮೂರ್ತಿ ಅವರನ್ನು ಹಿರಿಯ ಕೆಎಎಸ್ ಅಧಿಕಾರಿಯಾಗಿ ಮುಂಬಡ್ತಿಗೊಳಿಸಿ ಸರ್ಕಾರ ಅದೇಶಿಸಿದೆ. ಶಿವಮೊಗ್ಗ ಜಿಲ್ಲೆಯ ಸಾಗರದವರಾದ ಕೃಷ್ಣಮೂರ್ತಿ ಅವರು ಮುಂಬಡ್ತಿ ಪಡೆದರೂ ಸದ್ಯಕ್ಕೆ ಸಹಾಯಕ ಆಯುಕ್ತರಾಗಿ ಪುತ್ತೂರಿನಲ್ಲಿಯೇ ಮುಂದುವರಿಯಲಿದ್ದಾರೆ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News