ಸೆ.24ರಂದು ಮಂಗಳೂರಿಗೆ ನೀರು ಪೂರೈಕೆ ಸ್ಥಗಿತ

Update: 2019-09-22 13:28 GMT

ಮಂಗಳೂರು, ಸೆ.22: ಮಂಗಳೂರು ಮಹಾನಗರ ಪಾಲಿಕೆಯ ತುಂಬೆ ನೀರು ಪಂಪಿಂಗ್ ಸ್ಥಾವರಗಳಿಗೆ ವಿದ್ಯುತ್ ಪೂರೈಕೆ ಮಾಡುವ 33 ಕೆವಿ ತಂತಿಗಳನ್ನು ಬದಲಾಯಿಸಿ, ಹೊಸ ಕೇಬಲ್ ಅಳವಡಿಸುವ ಕಾರ್ಯದ ಹಿನ್ನೆಲೆಯಲ್ಲಿ ಸೆ.24ರಂದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.

ಮಂಗಳೂರು ನಗರದ ಭಾಗಶಃ ಪ್ರದೇಶ, ಮಂಗಳಾದೇವಿ, ಬಜಾಲ್, ಮೇರಿಹಿಲ್, ಪಚ್ಚನಾಡಿ, ಜಪ್ಪಿನಮೊಗರು, ವಾಮಂಜೂರು, ನೀರುಮಾರ್ಗ, ಶಕ್ತಿನಗರ, ಕಣ್ಣೂರು ಮುಂತಾದ ಪ್ರದೇಶಗಳಲ್ಲಿ ನೀರು ಪೂರೈಕೆ ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News