ಉಸ್ತುವಾರಿ ಚರ್ಚೆ ಕೊನೆಗೊಳಿಸಲು ಸಚಿವ ಕೋಟ ಮನವಿ

Update: 2019-09-22 15:26 GMT

ಉಡುಪಿ, ಸೆ.22: ಉಡುಪಿ ಜಿಲ್ಲೆಯ ಉಸ್ತುವಾರಿ ಬಗ್ಗೆ ನಡೆಯುತ್ತಿರುವ ಸಾರ್ವಜನಿಕ ಚರ್ಚೆಯಿಂದ ನನಗೆ ಸಹಜವಾಗಿ ಮುಜುಗರವಾಗುತ್ತಿದ್ದು, ನನ್ನ ಸಮಾಜವೂ ಸೇರಿದಂತೆ ಎಲ್ಲ ಆತ್ಮೀಯರು ಈ ಕುರಿತ ಚರ್ಚೆ ಮತ್ತು ವಾದವನ್ನು ಇಲ್ಲಿಗೆ ಮುಗಿಸಬೇಕೆಂದು ಮೀನುಗಾರಿಕೆ, ಬಂದರು ಒಳನಾಡು ಜಲ ಸಾರಿಗೆ ಹಾಗೂ ಮುಜರಾಯಿ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿ ವಿನಂತಿ ಮಾಡಿದ್ದಾರೆ.

ಪಕ್ಷ ಮತ್ತು ಮುಖ್ಯಮಂತ್ರಿಗಳು ಕೊಟ್ಟ ಅವಕಾಶ ಉಪಯೋಗಿಸಿಕೊಂಡು ಸರಕಾರದ ಗೌರವ ಹೆಚ್ಚಿಸುವ ಕೆಲಸ ಮಾಡಲು ಶ್ರಮ ವಹಿಸಿ ದುಡಿಯುವ ನಿರ್ಧಾರ ಮಾಡಿದ್ದೇನೆ. ಈ ಮಧ್ಯೆ ಉಡುಪಿ ಜಿಲ್ಲೆಯ ಉಸ್ತುವಾರಿ ಬಗ್ಗೆ ನಡೆಯುತ್ತಿರುವ ಸಾರ್ವಜನಿಕ ವರದಿ ಕಾರ್ಯಕರ್ತರಲ್ಲಿ ಮತ್ತು ಜನಸಾಮಾನ್ಯರಲ್ಲಿ ನಿತ್ಯ ಚರ್ಚೆಯ ವಿಷಯವಾಗಿ ಮಾರ್ಪಡುತ್ತಿದೆ. ಇಲ್ಲಿಯವರೆಗೂ ನನ್ನ ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿದ ನನಗೆ ಇದರಿಂದ ಸಹಜವಾಗಿಯೇ ಮುಜುಗರವಾಗುತ್ತಿದೆ. ಚರ್ಚೆಯ ಬದಲು ತಮ್ಮೆಲ್ಲರ ಮಾರ್ಗದರ್ಶನ ನನಗೆ ಶಕ್ತಿ ಕೊಡಲಿದೆಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News