ಕುಂದಾಪುರ: ಜುಗಾರಿ ಆಡುತ್ತಿದ್ದ ನಾಲ್ವರ ಬಂಧನ

Update: 2019-09-22 15:58 GMT

ಉಡುಪಿ, ಸೆ.22: ಕುಂದಾಪುರ ಆನಗಳ್ಳಿ ಗ್ರಾಮದ ತೊಪ್ಪಲು ಎಂಬಲ್ಲಿ ಸೆ.21ರಂದು ಸಂಜೆ 6.45ರ ಸುಮಾರಿಗೆ ಅಂದರ್-ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ನಾಲ್ವರನ್ನು ಉಡುಪಿ ಸೆನ್ ಪೊಲೀಸರು ಬಂಧಿಸಿದ್ದಾರೆ.

ಆನಗಳ್ಳಿಯ ವಿಶ್ವನಾಥ(37), ಕೊಕ್ಕರ್ಣೆಯ ಅನಿಲ್(27), ಕುಂಭಾಶಿಯ ರವಿ(36), ಕೊಳಲಗಿರಿಯ ರಾಘವೇಂದ್ರ(28) ಬಂಧಿತ ಆರೋಪಿಗಳು. ಇವರಿಂದ 7,160ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News