ಯುವ ಮದ್ದಳೆವಾದಕ ವಿನಯ ಆಚಾರ್ಯ ನಿಧನ

Update: 2019-09-23 14:19 GMT

ಮಂಗಳೂರು, ಸೆ.23: ಪ್ರಸಿದ್ಧ ಯಕ್ಷಗಾನ ಚೆಂಡೆ ವಾದಕ ದಿ.ಕಡಬ ನಾರಾಯಣ ಆಚಾರ್ಯರ ತೃತೀಯ ಪುತ್ರ ಯುವ ಪ್ರತಿಭಾನ್ವಿತ ಮದ್ದಳೆಗಾರ ವಿನಯ ಆಚಾರ್ಯ ಕಡಬ (33) ಅಲ್ಪಕಾಲದ ಅಸೌಖ್ಯದಿಂದ ನಗರದ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.
ಮೃತ ವಿನಯ ಆಚಾರ್ಯ ತಾಯಿ, ನಾಲ್ವರು ಸಹೋದರರು ಹಾಗೂ ತಂಗಿಯನ್ನು ಅಗಲಿದ್ದಾರೆ.

ತಂದೆಯಿಂದ ಬಳುವಳಿಯಾಗಿ ಬಂದ ಕಲೆಯನ್ನು ಸ್ವಪರಿಶ್ರಮದಿಂದ ಮದ್ದಳೆವಾದನವನ್ನು ಕಲಿತು ಮಂಗಳಾದೇವಿ ಮೇಳದಲ್ಲಿ ಆರಂಭದ ತಿರುಗಾಟ ಮಾಡಿ ಬಳಿಕ, ಎಡನೀರು, ತದನಂತರ ಹೊಸನಗರ ಮೇಳ (ಈಗ ಹನುಮಗಿರಿ ಮೇಳ) ಗಳಲ್ಲಿ ಮದ್ದಳೆಗಾರನಾಗಿ ಪ್ರಸಿದ್ಧಿಯ ಪಥದಲ್ಲಿ ಸಾಗಿದ್ದರು.

ಹಿರಿಯ ಭಾಗವತರಾದ ದಿನೇಶ ಅಮ್ಮಾಣ್ಣಾಯರ ಜೊತೆ ಅನೇಕ ಕಡೆಗಳಲ್ಲಿ ‘ಯಕ್ಷ-ಗಾನ-ವೈಭವ’ ಕಾರ್ಯಕ್ರಮ ನೀಡಿ ತನ್ನ ಪ್ರತಿಭೆಯನ್ನು ಪ್ರಕಟಪಡಿಸಿದ್ದರು. ಪಟ್ಲ ಫೌಂಡೇಶನ್‌ನ ಸತೀಶ್ ಶೆಟ್ಟಿ ಪಟ್ಲ ಸಹಿತ ಅನೇಕ ಯಕ್ಷಮಿತ್ರರು ಅಂತಿಮ ದರ್ಶನ ಪಡೆದು ಯುವ ಕಲಾವಿದನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News