ವಿದ್ಯಾರ್ಥಿ ತುಳು ಸಮ್ಮೇಳನ: ಭಾಷೆ, ಸಂಸ್ಕೃತಿಗೆ ಪೂರಕ ಸ್ಪರ್ಧೆ ಆಯೋಜಿಸಲು ನಿರ್ಧಾರ

Update: 2019-09-23 14:51 GMT

ಮಂಗಳೂರು, ಸೆ.23: ತುಳು ಪರಿಷತ್ ವತಿಯಿಂದ ಡಿಸೆಂಬರ್‌ನಲ್ಲಿ ಮಂಗಳೂರಿನಲ್ಲಿ ಆಯೋಜಿಸಲು ಉದ್ದೇಶಿಸಲಾಗಿರುವ ಪ್ರಥಮ ವಿದ್ಯಾರ್ಥಿ ತುಳು ಸಮ್ಮೇಳನದ 2ನೆ ಸಮಾಲೋಚನಾ ಸಭೆ ನಗರದ ಮ್ಯಾಪ್ಸ್ೃ ಕಾಲೇಜಿನಲ್ಲಿ ಇತ್ತೀಚೆಗೆ ಜರುಗಿತು.

ವಿದ್ಯಾರ್ಥಿ ತುಳು ಸಮ್ಮೇಳನ ಆಯೋಜನಾ ಸಮಿತಿಯ ಅಧ್ಯಕ್ಷ ಡಾ. ಪ್ರಭಾಕರ ನೀರ್‌ಮಾರ್ಗ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ಸ್ವರ್ಣ ಸುಂದರ್ ಸಭಾ ಕಲಾಪವನ್ನು ನಡೆಸಿಕೊಟ್ಟರು. ಸಮ್ಮೇಳನದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗುವ ವಿವಿಧ ಸ್ಪರ್ಧೆಗಳ ಬಗ್ಗೆ ತುಳು ಪರಿಷತ್ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಮಾಹಿತಿ ನೀಡಿದರು.

ಪ್ರೌಢ ಶಾಲೆ, ಕಾಲೇಜು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಸಮ್ಮೇಳನದ ಸ್ಪರ್ಧೆಗಳಲ್ಲಿ ಭಾಗವಹಿಸುವ ವಿಚಾರವಾಗಿ ತುಳು ಪರಿಷತ್ ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮನ್ನ, ಉಪಾಧ್ಯಕ್ಷರಾದ ಪ್ರಶಾಂತ್ ಕಾರಂತ್, ಧರಣೇಂದ್ರ ಕುಮಾರ್, ಶಿವಾನಂದ ಕರ್ಕೇರಾ, ಶಭೋದಯ ಆಳ್ವಾ, ಡಾ. ವಾಸುದೇವ ಬೆಳ್ಳೆ ಸಭೆಗೆ ಮಾಹಿತಿ ನೀಡಿದರು.

ಸಮ್ಮೇಳನದ ಅಂಗವಾಗಿ ದ.ಕ., ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳಿಗೆ ತುಳು ಭಾಷೆ ಮತ್ತು ಸಂಸ್ಕೃತಿತಯ ಬಗ್ಗೆ ಸುಮಾರು 14 ವಿವಿಧ ರೀತಿಯ ಸ್ಪರ್ಧೆಗಳನ್ನು ವಿವಿಧ ಕೇಂದ್ರಗಳಲ್ಲಿ ಆಯೋಜಿಸಲು ತೀರ್ಮಾನಿಸಲಾಯಿತು. ಸ್ಪರ್ಧೆಯನ್ನು ಆಯೋಜಿಸಲು ವಿವಿಧ ಉಪ ಸಮಿತಿಗಳನ್ನು ರಚಿಸಲಾಯಿತು.

ಡಾ.ಮೀನಾಕ್ಷಿ ರಾಮಚಂದ್ರ, ಪಲ್ಲವಿ ಕಾರಂತ್, ಶ್ರೀಲತಾ ಉಳ್ಳಾಲ್, ಜಿನೇಶ್ ಪ್ರಸಾದ್, ವಸಂತ ಕೇದಿಗೆ, ಜಯಲಕ್ಷ್ಮಿ ಶೆಟ್ಟಿ, ಗೋಪಾಲ ಅಂಚನ್, ಕೃಷ್ಣಮೂರ್ತಿ ಪಿ, ಚೇತನ್ ಮುಂಡಾಜೆ, ಚಂದ್ರಹಾಸ ಕಣಂತೂರು ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಅಮಿತಾ ಆಳ್ವಾ, ಮಣಿ ಎಂ. ರೈ , ದಿವಾಕರ್ ಪದ್ಮುಂಜ, ಇಸ್ಮಾಯೀಲ್ ಪೆರಿಂಜೆ , ಪ್ರಶಾಂತ್ ಹೊಸಂಗಡಿ, ಸುದರ್ಶನ್ ಪಿಲಿಂಬು, ಹರೀಶ್ ಅಮೈ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News