ಪಾದುವ ರಂಗ ಶಿಬಿರಾರ್ಥಿಗಳಿಂದ ಬೀದಿ ನಾಟಕ

Update: 2019-09-23 17:08 GMT

ಮಂಗಳೂರು: ಜೆಸಿಐ ಮಂಗಳೂರು ಲಾಲ್ ಬಾಗ್, ಲಯನ್ಸ್ ಕ್ಲಬ್ ಮಂಗಳೂರು ನೇತ್ರಾವತಿ, ಹಾಗೂ ಪಾದುವ ರಂಗ ಅಧ್ಯಯನ ಕೇಂದ್ರ ಜಂಟಿಯಾಗಿ 'ಸಾಮಾಜಿಕ ಸಮಸ್ಯೆಗಳ ತಲ್ಲಣಗಳು' ಎಂಬ ವಿಷಯದ ಮೇಲೆ ಮಂಗಳೂರಿನ ಕದ್ರಿ ಪಾರ್ಕ್ ಆವರಣದಲ್ಲಿ ಬೀದಿ ನಾಟಕವನ್ನು ಪ್ರದರ್ಶಿಸಿದರು. 

ಕಾರ್ಯಕ್ರಮದ ಉದ್ಘಾಟಕರಾಗಿ ಲಯನ್ ಪ್ರಾದೇಶಿಕ ಅಧ್ಯಕ್ಷೆಯಾದ ಲಯನ್ ಸಬಿತಾ ಶೆಟ್ಟಿ ಆಗಮಿಸಿದ್ದರು. ಮುಖ್ಯ ಅತಿಥಿಯಾಗಿ ಜೆಸಿಐ ವಲಯ 15, ಇದರ ಕಾರ್ಯದರ್ಶಿಯಾದ ಜೆಸಿ ರಕ್ಷಿತ್ ಕುಡುಪು ಆಗಮಿಸಿದ್ದರು. ಅತಿಥಿಗಳಾಗಿ ಮಾಜಿ ವಲಯ ಅಧ್ಯಕ್ಷರಾದ ಜೆಸಿ ಡಾ. ಅರವಿಂದ್ ರಾವ್ ಕೇದಿಗೆ, ಹಾಗೂ ಲಯನ್ಸ್ ಕ್ಲಬ್ ಮಂಗಳೂರು, ನೇತ್ರಾವತಿ ಇದರ ಅಧ್ಯಕ್ಷೆಯಾದ ಲಯನ್ ಫ್ಲಾವಿ ಪಿಂಟೊ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜೆಸಿಐ ಮಂಗಳೂರು ಲಾಲ್ ಬಾಗ್ ಇದರ ಅಧ್ಯಕ್ಷರಾದ ಜೆಸಿ ದೀನತ್ ಡೆಸಾರವರು ನಿರ್ವಹಿಸಿದರು. 

ಬೀದಿನಾಟಕವನ್ನು ಪಾದುವ ಕಾಲೇಜಿನಲ್ಲಿ‌ ನಡೆಯುವ ರಂಗ ಶಿಬಿರ್ ಶಿಬಿರಾರ್ಥಿಗಳು, ನಿರ್ದೇಶಕ ಸ್ಮಿತೇಶ್ ಇವರ ನಿರ್ದೇಶನದಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News