ಎಡಿಸಿ ಸದಾಶಿವ ಪ್ರಭುಗೆ ಭಡ್ತಿ
Update: 2019-09-23 17:42 GMT
ಉಡುಪಿ, ಸೆ.23: ಉಡುಪಿಯ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರಿಗೆ ರಾಜ್ಯ ಸರಕಾರ ಭಡ್ತಿ ನೀಡಿದೆ. ಕೆಎಎಸ್ ಹಿರಿಯ ಶ್ರೇಣಿ ಅಧಿಕಾರಿಯಾಗಿದ್ದ ಪ್ರಭು ಅವರಿಗೆ ಕೆಎಎಸ್ ಆಯ್ಕೆ ಶ್ರೇಣಿಗೆ ಭಡ್ತಿ ನೀಡಿ ಪದೋನ್ನತಿಗೊಳಿಸಿ, ಉಡುಪಿಯ ಅಪರ ಜಿಲ್ಲಾಧಿಕಾರಿಯಾಗಿ ಮುಂದುವರಿ ಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.