ಎಸ್‍ವೈಎಸ್ ಕುಕ್ಕಾಜೆ ನೂತನ ಪದಾಧಿಕಾರಿಗಳ ನೇಮಕ

Update: 2019-09-23 17:55 GMT

ಬಂಟ್ವಾಳ, ಸೆ. 23: ಕಾಪಿಕಾಡ್ ತಾಜುಲ್ ಉಲಮಾ ಸುನ್ನೀ ಸೆಂಟರ್‍ನಲ್ಲಿ ಎಸ್‍ವೈಎಸ್ ಕುಕ್ಕಾಜೆ ಬ್ರಾಂಚ್ ಮಹಾಸಭೆಯು ಕುಕ್ಕಾಜೆ ಬ್ರಾಂಚ್ ಅಧ್ಯಕ್ಷರಾದ ಮೊಯಿದು ಕುಂಞಿ ನಾಡಾಜೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ರಫೀಕ್ ಝುಹ್ರಿ ಮಂಚಿ ಸಭೆಯನ್ನು ಉದ್ಘಾಟಿಸಿದರು. 

ರಿಟೇನಿಂಗ್ ಅಧಿಕಾರಿಯಾಗಿ ಆಗಮಿಸಿದ ಅಬೂಬಕರ್ ಲತೀಫೀ ಉಸ್ತಾದ್ ಎಣ್ಮೂರು ಸಂಘಟನಾ ಮಹತ್ವವನ್ನು ವಿವರಿಸಿದರು. ಮಹ್ಮೂದ್ ಸಅದಿ ಆಶಂಸಾ ಭಾಷಣ ಮಾಡಿದರು. ಸಭೆಯಲ್ಲಿ ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ , ಅಬೂಬಕರ್ ತೋಟ, ಮುಹಮ್ಮದ್ ಕುಂಞಿ ಕಾಪಿಕಾಡ್, ಅಝೀಝ್ ಮಿಸ್ಬಾಹಿ, ಅಬ್ದುಲ್ಲ ಮುಸ್ಲಿಯಾರ್ ನಾಡಾಜೆ, ಅಬ್ಬಾಸ್ ಮುಸ್ಲಿಯಾರ್ ಕುಕ್ಕಾಜೆ ಹಾಗೂ ಎಸ್ಸೆಸ್ಸೆಫ್, ಎಸ್ವೈಎಸ್  ಸದಸ್ಯರು ಹಾಜರಿದ್ದರು.

ನೂತನ ಅಧ್ಯಕ್ಷರಾಗಿ ಮಹ್ಮೂದ್ ಸಅದಿ ಕುಕ್ಕಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಮುಸ್ಲಿಯಾರ್ ಕುಕ್ಕಾಜೆ, ಕೋಶಾಧಿಕಾರಿಯಾಗಿ ಮುಹಮ್ಮದ್ ಕಾಪಿಕಾಡ್, ಉಪಾಧ್ಯಕ್ಷರಾಗಿ ಅಬ್ದುಸ್ಸಲಾಂ ಕುಕ್ಕಾಜೆ, ಜೊತೆ ಕಾರ್ಯದರ್ಶಿಗಳಾಗಿ ಜಬ್ಬಾರ್ ಕುಕ್ಕಾಜೆ, ಹಾಗೂ ಬಶೀರ್ ಕಾಪಿಕಾಡ್ ಅವರು ಆಯ್ಕೆಯಾದರು.

ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ಸ್ವಾಗತಿಸಿ, ನೂತನ ಪ್ರ.ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News