ಮಂಜೇಶ್ವರ ಉಪಚುನಾವಣೆ: ಯುಡಿಎಫ್ ಅಭ್ಯರ್ಥಿಯಾಗಿ ಎಂ.ಸಿ ಕಮರುದ್ದೀನ್
Update: 2019-09-25 16:57 IST
ಮಂಜೇಶ್ವರ: ಮಂಜೇಶ್ವರ ವಿಧಾನ ಸಭಾ ಕ್ಷೇತ್ರಕ್ಕೆ ಅ. 21 ಕ್ಕೆ ಉಪಚುನಾವಣೆ ನಡೆಯಲಿದ್ದು ಯುಡಿಎಫ್ ಅಭ್ಯರ್ಥಿಯಾಗಿ ಮುಸ್ಲಿಂ ಲೀಗ್ ಕಾಸರಗೋಡು ಜಿಲ್ಲಾಧ್ಯಕ್ಷ ಎಂ.ಸಿ ಕಮರುದ್ದೀನ್ ಸ್ಪರ್ಧಿಸಲಿದ್ದಾರೆಂದು ಪಾಣಕ್ಕಾಡ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮುಸ್ಲಿಂ ಲೀಗ್ ರಾಜ್ಯಾಧ್ಯಕ್ಷ ಸಯ್ಯಿದ್ ಹೈದರಲಿ ಶಿಹಾಬ್ ತಂಙಳ್ ಹೇಳಿದ್ದಾರೆ.