ಮದ್ರಸ ಅಧ್ಯಾಪಕ ಕ್ಷೇಮನಿಧಿ ಮಂಡಳಿ ಸದಸ್ಯರಾಗಿ ಮುಕ್ಕಂ ಫೈಝಿ ಆಯ್ಕೆ

Update: 2019-09-25 16:18 GMT

ಕಲ್ಲಿಕೋಟೆ: ರಾಜ್ಯ ಮದ್ರಸ ಅಧ್ಯಾಪಕ ಕ್ಷೇಮ ನಿಧಿ ಮಂಡಳಿಯ ಸದಸ್ಯರಾಗಿ ಅಲ್ ಬಿರ್ರ್‌ ಪ್ರೀ ಸ್ಕೂಲ್ ಇದರ ಕನ್ವಿನರ್ ಉಮರ್ ಫೈಝಿ ಮುಕ್ಕಂ ಅವರನ್ನು ಕೇರಳ ಸರಕಾರವು ನೇಮಕ ಮಾಡಿ ಆದೇಶ ಹೂರಡಿಸಿದೆ.

ಅಹ್ಮದ್ ದೇವರ್‌ಕೋವಿಲ್ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಉಮರ್ ಫೈಝಿಯವರನ್ನು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಕೆ.ಟಿ. ಜಲೀಲ್ ನೇಮಕ ಮಾಡಿದ್ದಾರೆ.

ಸಮಸ್ತ ಕೇಂದ್ರ ಮುಶಾವರ ಸದಸ್ಯರಾಗಿರುವ ಇವರು, ಎಸ್‌ಎಂಎಫ್ ರಾಜ್ಯ ಕೋಶಾಧಿಕಾರಿ, ವಿದ್ಯಾಭ್ಯಾಸ ಬೋರ್ಡ್ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ ಸೇವೆಗೈಯುತ್ತಿದ್ದಾರೆ.

ಸನ್ಮಾನ: ಮದ್ರಸ ಅಧ್ಯಾಪಕ ಕ್ಷೇಮ ನಿಧಿ ಮಂಡಳಿಗೆ ನೇಮಕಗೊಂಡ ಮುಕ್ಕಂ ಫೈಝಿ ಅವರನ್ನು ಅಲ್‌ಬಿರ್ರ್‌ ಆಡಳಿತ ಮಂಡಳಿಯ ವತಿಯಿಂದ ಕಲ್ಲಿಕೋಟೆಯ ಕಿಂಗ್‌ಪೋರ್ಟ್ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಲ್‌ಬಿರ್ರ್ ಆಡಳಿತ ನಿರ್ದೇಶಕ ಮುಹಮ್ಮದ್ ಕೆ.ಪಿ., ಕೇರಳದ ಕೋ ಆರ್ಡಿನೇಟರ್, ಇಸ್ಮಾಯೀಲ್ ಮುಜದ್ದಿದಿ, ಫೈಝಲ್ ಹುದವಿ, ಕರ್ನಾಟಕ ಅಲ್‌ಬಿರ್ರ್‌ ಕೋ ಆರ್ಡಿನೇಟರ್ ಅಕ್ಬರ್ ಅಲಿ ಅಡ್ಡೂರು, ಅಲ್‌ಬಿರ್ರ್‌ ಕಿಡ್ಸ್ ಸಂಪಾದಕ ಯೂಸುಫ್ ಎಂ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News