ಉಡುಪಿ: ಮಗಳ ಅನಾರೋಗ್ಯದ ಚಿಂತೆಯಲ್ಲಿ ತಂದೆ ಆತ್ಮಹತ್ಯೆ
Update: 2019-09-25 21:37 IST
ಅಮಾಸೆಬೈಲು, ಸೆ.25: ಮಗಳ ಅನಾರೋಗ್ಯದ ವಿಚಾರದಲ್ಲಿ ಮನನೊಂದು ತಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.24ರಂದು ಸಂಜೆ ಹೊಸಂಗಡಿ ಗ್ರಾಮದ ಮುಂಗಳಿಕೆ ಎಂಬಲ್ಲಿ ನಡೆದಿದೆ.
ಮೃತರನ್ನು ಹೊಸಂಗಡಿ ಗ್ರಾಮದ ಮಂಡಗದ್ದೆಯ ತಿಮ್ಮಪ್ಪದಾಸ(48) ಎಂದು ಗುರುತಿಸಲಾಗಿದೆ. ಇವರು ಮನೆ ಸಮೀಪದ ಅರಣ್ಯ ಪ್ರದೇಶದಲ್ಲಿ ಶರಾಬಿನೊಂದಿಗೆ ವಿಷ ಸೇವನೆ ಮಾಡಿ ನಂತರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.