ಫ್ಯಾಕ್ಟರಿಗೆ ನುಗ್ಗಿ ನಗದು ಕಳವು
Update: 2019-09-26 15:25 GMT
ಗಂಗೊಳ್ಳಿ, ಸೆ.26: ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಎಂಬಲ್ಲಿ ಸೆ.24ರಂದು ರಾತ್ರಿ ವೇಳೆ ಫ್ಯಾಕ್ಟರಿಗೆ ನುಗ್ಗಿದ ಕಳ್ಳರು ಸಾವಿರಾರು ರೂ. ನಗದು ಕಳವು ಮಾಡಿ ರುವ ಬಗ್ಗೆ ವರದಿಯಾಗಿದೆ.
ಕೇಶವ ಮೊಗವೀರ ಹಾಗೂ ರಾಜು ಎಂಬವರ ಪಾಲುದಾರಿಕೆಯ ಆದಿತ್ಯ ಕ್ಲೇ ಪ್ರೊಡಕ್ಟ್ ಉದ್ಯಮದ ಫ್ಯಾಕ್ಟರಿಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಡ್ರಾವರ್ನಲ್ಲಿರಿಸಿದ್ದ 20,000 ರೂ. ಹಾಗೂ ದೇವರ ಕಾಣಿಕೆ ಹುಂಡಿ ಯಲ್ಲಿದ್ದ 5,000ರೂ. ಕಳವು ಮಾಡಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.