ಸಾರ್ವಜನಿಕ ಶಾಂತಿ ಭಂಗ: ಚಾಲಕ ವಿರುದ್ಧ ಪ್ರಕರಣ
Update: 2019-09-26 15:25 GMT
ಅಮಾಸೆಬೈಲು, ಸೆ.26: ಹೊಸಂಗಡಿ ಚೆಕ್ಪೋಸ್ಟ್ನಲ್ಲಿ ಸೆ.25ರಂದು ರಾತ್ರಿ 11:45ರ ಸುಮಾರಿಗೆ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು ಸಾರ್ವ ಜನಿಕರ ನೆಮ್ಮದಿಗೆ ಶಾಂತಿಭಂಗ ಉಂಟು ಮಾಡುತ್ತಿದ್ದ ಬಸ್ ಹಾಗೂ ಲಾರಿ ಚಾಲಕರ ವಿರುದ್ಧ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿದ್ದಾಪುರ ಕಡೆಯಿಂದ ಬರುತ್ತಿದ್ದ ಲಾರಿ, ಶ್ರೀದುರ್ಗಾಂಬಾ ಬಸ್ನ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಜಖಂಗೊಳಿಸಿದ್ದು, ನಂತರ ಲಾರಿ ಚಾಲಕ ಗದಗ ಜಿಲ್ಲೆಯ ಬಸವರಾಜ್ ಶಾಂತಗೇರಿ ಹಾಗೂ ಬಸ್ ಚಾಲಕ ಸಾಬರಕಟ್ಟೆಯ ಈಶ್ವರ್ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು ಸಾರ್ವಜನಿಕರ ನೆಮ್ಮದಿಗೆ ಶಾಂತಿಭಂಗ ಉಂಟು ಮಾಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.