ಉಪ್ಪಳ: ದಾರುಲ್ ಉಲೂಂ ದರ್ಸ್ ವಾರ್ಷಿಕ ಸಮ್ಮೇಳನದ ಸ್ವಾಗತ ಸಮಿತಿ ಸಭೆ

Update: 2019-09-28 14:24 GMT

ಉಪ್ಪಳ: ಪಿ.ಎಂ.ಅಬ್ದುಲ್ ಹಮೀದ್ ಮದನಿ ಉಸ್ತಾದರ ನೇತೃತ್ವದಲ್ಲಿ ನಡೆಯುತ್ತಿರುವ ದಾರುಲ್ ಉಲೂಂ ದರ್ಸ್ ಇದರ 30ನೇ ವಾರ್ಷಿಕ ಮಹಾ ಸಮ್ಮೇಳನದ ಸ್ವಾಗತ ಸಮಿತಿಯು ಉಪ್ಪಳ ಕುನ್ನಿಲ್ ನುಸ್ರತುಲ್ ಇಸ್ಲಾಂ ಮದ್ರಸದಲ್ಲಿ ಇತ್ತಿಚೆಗೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ ಸಲಾಂ ಮುಸ್ಲಿಯರ್ ವಹಿಸಿದ್ದರು, ಗೋಲ್ಡನ್ ಮೂಸಾ ಕಾರ್ಯಕ್ರಮ ಉದ್ಘಾಟಿಸಿದರು,
ಶೈಖುನಾ ಅಬ್ದುಲ್ ಹಮೀದ್ ಮದನಿ ಪ್ರಾರ್ಥನೆಗೈದರು.

ಸ್ವಾಗತ ಸಮಿತಿಗೆ ನಿರ್ದೇಶಕ ಸಮಿತಿ ಚೈರ್ಮಾನ್ ಆಗಿ  ಗೋಲ್ಡನ್ ಮೂಸಾ ಹಾಜಿ ,,ಚೈರ್ಮಾನ್ ಆಗಿ ಮಣ್ಣಾಟಿ ಇಬ್ರಾಹಿಮ್ ಹಾಜಿ, ಸಂಚಾಲಕರಾಗಿ ಮುಹಮ್ಮದ್ ರಫೀಕ್  ಬಾಖವಿ, ಕೋಶಾಧಿಕಾರಿಯಾಗಿ ಮುಹಮ್ಮದ್ ಪಾವೂರ್ ಹಾಗೂ ಅಬ್ದುಲ್ ಲತೀಫ್ ಉಪ್ಪಳ ಗೇಟ್,  ಕ್ಯಾಲಿಕೇಟ್ ಹಾಜಿ, ಯು.ಕೆ.ಅಬ್ದುಲ್ ರಹ್ಮಾನ್  ಹಾಜಿ, ಯು.ಎಂ.ಹಾಜಿ, ಯೂಸುಫ್ ಹಾಜಿ, ಇಬ್ರಾಹಿಮ್ ಹಾಜಿ ಸೇರಿ ಇನ್ನಿತರ ಸದಸ್ಯರನ್ನು ನೇಮಿಸಲಾಯಿತು ಎಂದು ತ್ವಯ್ಯಿಬ್ ಪೈಝಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News