ತೋಡಿಗೆ ಬಿದ್ದು ಯುವಕ ಮೃತ್ಯು

Update: 2019-09-30 16:29 GMT

ಶಂಕರನಾರಾಯಣ, ಸೆ.30: ಹೊಳೆಯ ತೋಡಿನ ನೀರಿಗೆ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಹಾಲಾಡಿ 76 ಗ್ರಾಮದ ಕುರ್ಕನಗುಡ್ಡೆ ಕಲ್ಲಟೆ ಎಂಬಲ್ಲಿ ಸೆ.29ರಂದು ಸಂಜೆ ವೇಳೆ ನಡೆದಿದೆ.

 ಮೃತರನ್ನು ಕುರ್ಕನಗುಡ್ಡೆ ಕಲ್ಲಟೆ ನಿವಾಸಿ ನಾರಾಯಣ ನಾಯ್ಕ ಎಂಬವರ ಮಗ ತಿಮ್ಮಪ್ಪನಾಯ್ಕ(35) ಎಂದು ಗುರುತಿಸಲಾಗಿದೆ. ದನಕರುಗಳಿಗೆ ಹುಲ್ಲು ತರಲು ಹೋದ ಇವರು, ಮನೆ ಸಮೀಪದ ಅರೆಕಲ್ಲು ಹೊಳೆಯ ತೋಡಿನ ನೀರಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.

ಈ ಬಗ್ಗೆ ಶಂಕರ ನಾರಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News