ಹಿರಿಯ ನಾಗರಿಕರ ಆರೈಕೆ ಕೆಲಸವಲ್ಲ, ಆದ್ಯ ಕರ್ತವ್ಯ: ಡಾ.ಅಶೋಕ್
ಉಡುಪಿ, ಅ.4: ಬದಲಾದ ಕಾಲ ಘಟ್ಟದಲ್ಲಿ ತುಂಬು ಕುಟುಂಬಗಳೆಲ್ಲಾ ಚಿಕ್ಕದಾಗುತ್ತಾ ಬಂದು ಹಿರಿಯ ನಾಗರಿಕರನ್ನು ನೋಡಿಕೊಳ್ಳುವವರು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹಿರಿಯ ನಾಗರಿಕರ ಆರೈಕೆ ಅದು ಕೆಲಸವಲ್ಲ, ಬದಲಿಗೆ ನಮ್ಮ ಕರ್ತವ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಸಮುದಾಯ ವೈದ್ಯಕೀಯ ವಿಭಾಗ ಕೆಎಂಸಿ ಮತ್ತು ಹಿರಿಯ ನಾಗರಿಕ ಸಂಸ್ಥೆ ಇವರ ಸಹಯೋಗದೊಂದಿಗೆ ಜಿಲ್ಲಾಸ್ಪತ್ರೆಯ ಹಿರಿಯ ನಾಗರಿಕರ ವಾರ್ಡಿನಲ್ಲಿ ವಿಶ್ವ ಹಿರಿಯ ನಾಗರಿಕ ದಿನಾಚರಣೆ ಮತ್ತು ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ಆಯೋಜಿಸಲಾದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಹಿರಿಯ ನಾಗರಿಕರು ಸೇರಿದಂತೆ ಪ್ರತಿಯೊಬ್ಬರೂ ಸರಿಯಾದ ಆಹಾರ ಸೇವನೆ ಮತ್ತು ನಿಯಮಿತ ವ್ಯಾಯಾಮ ಮಾಡುವ ಅಭ್ಯಾಸ ಬೆಳೆಸಿಕೊಂಡಾಗ ಆರೋಗ್ಯವಂತರಾಗಿರಬಹುದು. ಈ ಬಗ್ಗೆ ಹಿರಿಯರು ತಮ್ಮ ಮನೆಯಲ್ಲಿರುವ ಕಿರಿಯರಿಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು. ನಿತ್ಯ ಜೀವನದಲ್ಲಿ ವಾಕಿಂಗ್ ಮಾಡುವ ಪರಿಪಾಠವನ್ನು ಎಲ್ಲರೂ ರೂಢಿ ಮಾಡಿಕೊಂಡಾಗ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ. 30 ವರ್ಷ ಮೇಲ್ಪಟ್ಟವರೆಲ್ಲರೂ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲೇಬೇಕು. ಹಿರಿಯ ನಾಗರಿಕರು ತಮ್ಮ ಆರೋಗ್ಯಕ್ಕೆ ಸಂಬಂಧಪಟ್ಟ ವಿಷಯಗಳು, ಔಷಧಿಗಳನ್ನು ತೆಗೆದುಕೊಳ್ಳಲು ಮರೆಯುವುದು ಇಂತಹ ಸಮಸ್ಯೆಗಳನ್ನು ಕೌನ್ಸಿಲರ್ಗಳ ಬಳಿ ಹೇಳಿಕೊಂಡು ಪರಿಹಾ ದೊರಕಿಸಿಕೊಳ್ಳಬಹುದು ಎಂದರು.
ಎನ್ಸಿಡಿ ಟಕದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿ ಹಿರಿಯ ನಾಗರಿಕರಿಗೆ ಒಂದೇ ಕಡೇ ಎಲ್ಲಾ ಚಿಕಿತ್ಸೆಯನ್ನು ಒದಗಿಸಲು ಇದೊಂದು ಅತ್ಯುತ್ತಮ ವೇದಿಕೆ. ಹಿರಿಯರಿಗೆ ಸರತಿ ಸಾಲಿನಲ್ಲಿ ತುಂಬಾ ಹೊತ್ತು ಕಾಯುವುದು, ಪ್ರತ್ಯೇಕ ವಿಭಾಗಗಳಿಗೆ ಎಡತಾಕುವುದು ತ್ರಾಸದಾಯಕ ಕೆಲಸ. ಆದುದರಿಂದ ಹಿರಿಯ ನಾಗರಿಕರಿಗೆಂದೇ ಪ್ರತ್ಯೇಕ ಘಟಕವೊಂದನ್ನು ತೆರೆದು ಒಂದೇ ಸಮಯದಲ್ಲಿ ಎಲ್ಲಾ ವೈದ್ಯರೂ ಒಂದೇ ಕಡೆ ದೊರೆಯುವಂತೆ ಮಾಡಿ ಸೌಲ್ಯ ಕಲ್ಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಜಿಲ್ಲಾ ಹಿರಿಯ ನಾಗರಿಕ ಸಂಸ್ಥೆ ಅಧ್ಯಕ್ಷ ಸಿ.ಎಸ್.ರಾವ್ ಮಾತನಾಡಿ ಪ್ರತಿ ವರ್ಷವೂ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತಿದ್ದ ಹಿರಿಯ ನಾಗರಿಕರ ಉಚಿತ ತಪಾಸಣಾ ಶಿಬಿರ ಸರಕಾರಿ ಆಸ್ಪತ್ರೆಯಲ್ಲೂ ನಡೆಯುತ್ತಿರುವುದು ಹಿರಿಯರಿಗೆ ದೊರೆತ ಬೋನಸ್. ಜಿಲ್ಲೆಯಲ್ಲಿ ಹಿರಿಯರಿಗಾಗಿ ಸುಸಜ್ಜಿತ ವಾರ್ಡ್ ಇದ್ದರೂ ವೈದ್ಯರ ಕೊರತೆ ಹಾಗೂ ವಾರ್ಡ್ನ್ನು ಮೇಲ್ದರ್ಜೆಗೇರಿ ಸಬೇಕಾಗುವ ಬಗ್ಗೆ ಸರಕಾರಕ್ಕೆ ಮನವಿ ಪತ್ರವನ್ನು ಬರೆಯಲಾಗಿದೆ ಎಂದರು. ಜಿಲ್ಲಾ ಹಿರಿಯ ನಾಗರಿಕ ಸಂಸ್ಥೆ ಅ್ಯಕ್ಷಸಿ.ಎಸ್.ರಾವ್ಮಾತನಾಡಿಪ್ರತಿವರ್ಷವೂವಿವಿ ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತಿದ್ದ ಹಿರಿಯ ನಾಗರಿಕರ ಉಚಿತ ತಪಾಸಣಾ ಶಿಬಿರ ಸರಕಾರಿ ಆಸ್ಪತ್ರೆಯಲ್ಲೂ ನಡೆಯುತ್ತಿರುವುದು ಹಿರಿಯರಿಗೆ ದೊರೆತ ಬೋನಸ್. ಜಿಲ್ಲೆಯಲ್ಲಿ ಹಿರಿಯರಿಗಾಗಿ ಸುಸಜ್ಜಿತ ವಾರ್ಡ್ ಇದ್ದರೂ ವೈದ್ಯರ ಕೊರತೆ ಹಾಗೂ ವಾರ್ಡ್ನ್ನು ಮೇಲ್ದರ್ಜೆಗೇರಿ ಸಬೇಕಾಗುವ ಬಗ್ಗೆ ಸರಕಾರಕ್ಕೆ ಮನವಿ ಪತ್ರವನ್ನು ಬರೆಯಲಾಗಿದೆ ಎಂದರು. ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್, ಹಿರಿಯ ನಾಗರಿಕ ಸಂಸ್ಥೆಯ ಗೌರವಾಧ್ಯಕ್ಷ ಎ.ಪಿ.ಕೊಡಂಚ, ವೈದ್ಯಾಧಿಕಾರಿ ಚಂದ್ರಶೇಖರ ಅಡಿಗ, ಮಣಿಪಾಲ ಸಮುದಾಯ ವೈದ್ಯಕೀಯ ವಿಬಾಗದ ಡಾ.ಅಖಿಲಾ ಉಪಸ್ಥಿತ ರಿದ್ದರು.
ಎನ್ಟಿಸಿಪಿ ಘಟಕದ ಕೃತಿ ಎಂ.ಕೆ ಸ್ವಾಗತಿಸಿ ಮನು ಎಸ್.ಬಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.