ಉಪ್ಪಿನಂಗಡಿ: ಹೃದಯಾಘಾತದಿಂದ ವೀಡಿಯೊ ಗ್ರಾಫರ್ ಮೃತ್ಯು

Update: 2019-10-06 16:47 GMT

ಉಪ್ಪಿನಂಗಡಿ: ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ವೀಡಿಯೊ ಗ್ರಾಫರ್ ಹೃದಯಾಘಾತದಿಂದ ಮೃತಪಟ್ಟ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಪುತ್ತೂರಿನ ಕಬಕ ಗ್ರಾಮದ ಶೇವಿರೆ ನಿವಾಸಿ, ಮೂಲತಃ ಕಾಸರಗೋಡು ಜಿಲ್ಲೆಯ ಬದಿಯಡ್ಕದ ಅಗಲ್ಪಾಡಿ ಕುಂಡಾಜೆ ನಿವಾಸಿ ರಾಮಕೃಷ್ಣ ಭಟ್ ಎಂಬವರ ಪುತ್ರ ಬಾಲ ಸುಬ್ರಹ್ಮಣ್ಯ (34) ಮೃತರು.

ರವಿವಾರ ಬೆಳಗ್ಗೆ ಇವರು ತನ್ನ ಗೆಳೆಯ ದರ್ಬೆಯ ದಿನಕರ್ ಅವರೊಂದಿಗೆ ಉಪ್ಪಿನಂಗಡಿ ಆಸುಪಾಸಿನ ಹಚ್ಚ ಹಸುರ ಸೊಬಗನ್ನು ಸೆರೆ ಹಿಡಿಯಲು ಉಪ್ಪಿನಂಗಡಿಗೆ ಹೋಗುತ್ತಿದ್ದಾಗ 34 ನೆಕ್ಕಿಲಾಡಿ ಸಮೀಪದ ಕುಮಾರಧಾರ ಸೇತುವೆಯ ಬಳಿ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಪುತ್ತೂರು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟರು ಎಂದು ತಿಳಿದುಬಂದಿದೆ.

ಇವರಿಗೆ ವರ್ಷದ ಹಿಂದೆಯಷ್ಟೇ ವಿವಾಹವಾಗಿತ್ತು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News