ಬಜ್ಪೆ: ಬಾವಿಗೆ ಬಿದ್ದ ಚಿರತೆ

Update: 2019-10-07 12:45 GMT

ಬಜ್ಪೆ : ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಬಜ್ಪೆಯ ಕೈಕಂಬ ಸಮೀಪದ ತೆಂಕುಳಿಪಾಡಿ ಗ್ರಾಮದ  ಕಾಜಿಲ ಎಂಬಲ್ಲಿ ನಡೆದಿದೆ.

ಚಿರತೆ ಕೋಳಿಯೊಂದನ್ನು  ಬೆನ್ನಟ್ಟಿಕೊಂಡು ಹೋಗುವ ಸಂದರ್ಭ ಬಾವಿಗೆ ಆಯತಪ್ಪಿ ಬಿದ್ದಿರುವುದಾಗಿ ತಿಳಿದುಬಂದಿದೆ. ಬಾವಿಗೆ ಬಿದ್ದ ಚಿರತೆಯನ್ನು ಜೀವಂತವಾಗಿ ಮೇಲಕ್ಕೆತ್ತಲಾಗಿದೆ. ಅದನ್ನು ಪಿಲಿಕುಳ ವನ್ಯಜೀವಿ ಕೇಂದ್ರಕ್ಕೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ. 

ಘಟನಾ ಸ್ಥಳಕ್ಕೆ  ದ.ಕ. ಜಿಲ್ಲಾ ಅರಣ್ಯಾಧಿಕಾರಿ, ಪ್ರಾದೇಶಿಕ ಅರಣ್ಯಾಧಿಕಾರಿ ಶ್ರೀಧರ್, ಕೈಕಂಬ ವಲಯ ಅರಣ್ಯಾಧಿಕಾರಿ ಸುಧೀರ್ ಅವರ ನೇತೃತ್ವದಲ್ಲಿ  ಮತ್ತು  ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News