ಮಂಗಳೂರು: ಸಮಾಲೋಚಕರ ಹುದ್ದೆ ಅರ್ಜಿ ಆಹ್ವಾನ

Update: 2019-10-09 14:59 GMT

ಮಂಗಳೂರು, ಅ.9: ಸ್ವಚ್ಛ ಭಾರತ್ ಮಿಷನ್(ಗ್ರಾ) ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಮಾಲೋಚಕರ ಹುದ್ದೆಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳು: ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ(SLWM) ಜಿಲ್ಲಾ ಸಮಾಲೋಚಕರು, ವಿದ್ಯಾರ್ಹತೆ- ಬಿಇ-ಎನ್ವಿರಾನ್‌ಮೆಂಟಲ್ ಇಂಜಿನಿಯರಿಂಗ್ ವಿಥ್ ಸ್ಪೆಷಲೈಸೇಷನ್ ಇನ್ ಎನ್ವಿರಾನ್‌ಮೆಂಟಲ್ ಸೈನ್ಸ್, ಮಾಸಿಕ ಸಮಾಲೋಚನಾ ಶುಲ್ಕ 22 ಸಾವಿರ ರೂ. ನೀಡಲಾಗುವುದು.

ಹುದ್ದೆಯ ಅರ್ಜಿಯು ಜಿಲ್ಲಾ ಪಂಚಾಯತ್‌ನ ವೆಬ್‌ಸೈಟ್ (http://zpdk.kar.nic.in) ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಅರ್ಜಿಯನ್ನು ಸಂಬಂಧಪಟ್ಟ ದಾಖಲೆಗಳೊಂದಿಗೆ ಸ್ವಯಂ ದೃಢೀಕರಿಸಿ ಜಿಲ್ಲಾ ಪಂಚಾಯತ್ ಜಿಲ್ಲಾ ನೆರವು ಘಟಕ ಇಲ್ಲಿಗೆ ಅ.30ರೊಳಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 0824-2451222ನ್ನು ಸಂಪರ್ಕಿಸಲು ಜಿಪಂ ಸಿಇಒ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News