ಬಾವಿಗೆ ಹಾರಿ ಆತ್ಮಹತ್ಯೆ

Update: 2019-10-09 17:13 GMT

ಉಡುಪಿ, ಅ.9: ವೃದ್ಧರೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಾಲ್ಕೂರು ಗ್ರಾಮದಿಂದ ವರದಿಯಾಗಿದೆ. ಮೃತರನ್ನು ನಾಲ್ಕೂರು ಗ್ರಾಮದ ಮಾರಾಳಿ ಕಲ್ಮನೆಯ ಶಿವರಾಮ ಶೆಟ್ಟಿ (69) ಎಂದು ಗುರುತಿಸಲಾಗಿದೆ.

ಇವರು ನಿನ್ನೆ ಬೆಳಗ್ಗೆ 8ರಿಂದ 8:30ರ ನಡುವಿನ ಅವಧಿಯಲ್ಲಿ ಮಾರಾಳಿಯ ಮೋಹನದಾಸ ಶೆಟ್ಟಿ ಎಂಬವರ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News