ಉತ್ತರ ಪ್ರದೇಶ: ಹಿರಿಯ ಪತ್ರಕರ್ತನ ಕತ್ತುಸೀಳಿ ಹತ್ಯೆ

Update: 2019-10-11 15:46 GMT

ಖುಶಿನಗರ, ಅ.11: ಉತ್ತರ ಪ್ರದೇಶದ ಖುಶಿನಗರ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಹಿರಿಯ ಪತ್ರಕರ್ತನನ್ನು ಹತ್ಯೆಗೈದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಪತ್ರಕರ್ತನನ್ನು ಖುಶಿನಗರದ ಸಿಕ್ತಿಯ ತೊಲ ನಿವಾಸಿ 55ರ ಹರೆಯದ ರಾಧೆಶ್ಯಾಮ್ ಶರ್ಮಾ ಎಂದು ಗುರುತಿಸಲಾಗಿದ್ದು, ಇವರು ಸ್ಥಳೀಯ ಹಿಂದಿ ದಿನಪತ್ರಿಕೆಯಲ್ಲಿ ದುಡಿಯುತ್ತಿದ್ದರು.

ವರದಿಗಳ ಪ್ರಕಾರ, ತನ್ನ ಬೈಕ್‌ನಲ್ಲಿ ತೆರಳುತ್ತಿದ್ದ ಪತ್ರಕರ್ತನನ್ನು ದುಬೌಲಿ ಗ್ರಾಮದಲ್ಲಿ ತಡೆದ ದುಷ್ಕರ್ಮಿಗಳು ಅವರ ಕತ್ತು ಸೀಳಿ ಹತ್ಯೆಗೈದಿದ್ದಾರೆ. ಪೊಲೀಸರ ಪ್ರಕಾರ, ಶರ್ಮಾ ಅವರು ಗ್ರಾಮದ ಖಾಸಗಿ ಶಾಲೆಯಲ್ಲಿ ಬೋಧನೆ ಮಾಡುತ್ತಿದ್ದರು. ಸದ್ಯ ಪೊಲೀಸರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದು ದುಷ್ಕರ್ಮಿಗಳ ಗುರುತು ಪತ್ತೆಗೆ ಮತ್ತು ಹತ್ಯೆಯ ಉದ್ದೇಶವನ್ನು ತಿಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News