ರಾಜ್ಯಮಟ್ಟದ ಕಿರುಚಿತ್ರ ಸ್ಪರ್ಧೆಯ ಪೋಸ್ಟರ್ ಬಿಡುಗಡೆ
Update: 2019-10-12 13:20 GMT
ಕೋಟ, ಅ.12: ಎಡಿಟರ್ಸ್ಹಬ್ ಮಿಡಿಯಾ ಹೌಸ್ ಮತ್ತು ಮಾಯಾ ಬಜಾರ್ ಸಾರಥ್ಯದಲ್ಲಿ ಹಮ್ಮಿಕೊಳ್ಳಲಾಗಿರುವ ಸಿನಿ ಸ್ಕೋಪ್ ರಾಜ್ಯಮಟ್ಟದ ಕಿರುಚಿತ್ರ ಸ್ಪರ್ಧೆಯ ಪೋಸ್ಟರ್ನ್ನು ಚಿತ್ರನಟ ಪ್ರಮೋದ್ ಶೆಟ್ಟಿ ಬೇಳೂರಿನಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿದರು.
ಸ್ಪರ್ಧೆಯ ವಿಜೇತರಿಗೆ ಪ್ರಥಮ 25ಸಾವಿರ ರೂ. ಮತ್ತು ದ್ವಿತೀಯ 15ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಭಾಗವಹಿಸುವವರು 1000ರೂ. ಪ್ರವೇಶ ಶುಲ್ಕ ಪಾವತಿಸಬೇಕು. ಕಿರುಚಿತ್ರ 40ನಿಮಿಷಗಳ ಅವಧಿ ಯಲ್ಲಿ ಇರಬೇಕು. ಕನ್ನಡ ಭಾಷೆಯ ಕಿರುಚಿತ್ರಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಕಿರುಚಿತ್ರ ಕಳುಹಿಸಲು ಡಿ.25 ಕೊನೆಯ ದಿನಾಂಕವಾಗಿದೆ. ಕಿರುಚಿತ್ರವನ್ನು ಇಮೇಲ್ ciniscope19@gmail.com ವಿಳಾಸ ಕ್ಕೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 9620829231, 7760894964ನ್ನು ಸಂಪರ್ಕಿಸ ಬಹುದು. ಈ ಸಂದರ್ಭದಲ್ಲಿ ಪತ್ರಕರ್ತರಾದ ವಸಂತ್ ಗಿಳಿಯಾರ್, ಹರೀಶ್ ಕಿರಣ್ ತುಂಗ, ಪ್ರವೀಣ್ ಯಕ್ಷಿಮಠ್, ರಾಘವೇಂದ್ರ ಹಿರಿಯಣ್ಣ ಉಪಸ್ಥಿತರಿದ್ದರು.