ಮುಸುಕುಧಾರಿಯಿಂದ ಮಹಿಳೆಯ ಸರ ಸುಲಿಗೆ

Update: 2019-10-12 15:57 GMT

ಶಿರ್ವ, ಅ.12: ತೋಟದಲ್ಲಿ ತರಕಾರಿ ಕೊಯ್ಯುತ್ತಿದ್ದ ಮಹಿಳೆಯ ಚಿನ್ನದ ಸರವನ್ನು ಅಪರಿಚಿತ ವ್ಯಕ್ತಿಯೊಬ್ಬ ಅಪಹರಿಸಿ ಪರಾರಿಯಾಗಿರುವ ಘಟನೆ ಅ.11ರಂದು ಮಧ್ಯಾಹ್ನ 12ಗಂಟೆ ಸುಮಾರಿಗೆ ಪಾದೂರು ಗ್ರಾಮದ ಹೊಸಬೆಟ್ಟು ಬಸದಿಯ ಬಳಿ ನಡೆದಿದೆ.

ಪಾದೂರಿನ ಸುಜನ್ ಕುಮಾರ್ ಎಂಬವರ ಪತ್ನಿ ಗೀತಾ(54) ಎಂಬವರು ಮನೆಯ ಹಿಂದುಗಡೆ ತರಕಾರಿ ಕೊಯ್ಯುತ್ತಿರುವಾಗ ಮುಖಕ್ಕೆ ಬಟ್ಟೆಯನ್ನು ಸುತ್ತಿಕೊಂಡು ಬಂದ ಅಪರಿಚಿತ ವ್ಯಕ್ತಿಯೊಬ್ಬ, ಗೀತಾ ಅವರ ಕುತ್ತಿಗೆಗೆ ಬಿಳಿ ಬಟ್ಟೆಯನ್ನು ಬಿಗಿದು ಕುತ್ತಿಗೆಯಲ್ಲಿದ್ದ ಮೂವರೆ ಪವನ್ ತೂಕದ ಮಾಂಗಲ್ಯ ಸರವನ್ನು ಬಲತ್ಕಾರವಾಗಿ ಎಳೆದು ಪರಾರಿಯಾಗಿದ್ದಾನೆ ಎಂದು ದೂರಲಾಗಿದೆ.

ಈ ಸಂದರ್ಭ ಗೀತಾ ಅವರ ಕುತ್ತಿಗೆಯ ಬಳಿ ಹಾಗೂ ಕೈಗೆ ಮತ್ತು ಮೂಗಿನ ಕೆಳಗಡೆ ತರಚಿದ ಗಾಯವಾಗಿದೆ. ಸುಮಾರು 30-35ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ, ಕಂದು ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ಸ್ಯಾಂಡೋ ಬನಿಯನ್ ಹಾಗೂ ಪ್ಯಾಂಟ್‌ನಲ್ಲಿ ಕಪ್ಪುಬಣ್ಣದ ಬೆಲ್ಟ್ ಧರಿಸಿದ್ದನು.

ಸುಲಿಗೆ ಮಾಡಿದ ಮಾಂಗಲ್ಯ ಸರದ ಮೌಲ್ಯ 50,000ರೂ. ಎಂದು ಅಂದಾಜಿಸ ಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News