ಗಂಗೊಳ್ಳಿ: ಅಪಘಾತದ ಗಾಯಾಳು ಮೃತ್ಯು

Update: 2019-10-12 16:15 GMT

ಗಂಗೊಳ್ಳಿ, ಅ.12: ಅಪಘಾತದಿಂದ ಗಾಯಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಅ.11ರಂದು ಮಧ್ಯಾಹ್ನ ವೇಳೆ ಮರವಂತೆ ಎಂಬಲ್ಲಿ ನಡೆದಿದೆ.

ಮೃತರನ್ನು ತ್ರಾಸಿ ಹೊಸಪೇಟೆಯ ಮುತ್ತಯ್ಯ ಮೊಗವೀರ ಎಂಬವರ ಮಗ ನಾಗರಾಜ ಮೊಗವೀರ(39) ಎಂದು ಗುರುತಿಸಲಾಗಿದೆ. ಅ.7ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ನಾಗರಾಜ ಮೊಗವೀರ ಅವರನ್ನು ಅ.10ರಂದು ರಾತ್ರಿ 10ಗಂಟೆಗೆ ಆಸ್ಪತ್ರೆ ಯಿಂದ ಬಿಡುಗಡೆಗೊಳಿಸಿ ರಿಕ್ಷಾದಲ್ಲಿ ಕರೆದುಕೊಂಡು ಮನೆಗೆ ಬರಲಾಗಿತ್ತು.

ಆದರೆ ಅವರು ಮನೆ ಬಳಿ ಇಳಿಯದೇ ಅದೆ ಆಟೋರಿಕ್ಷಾದಲ್ಲಿ ಮರವಂತೆಗೆ ಹೋಗಿದ್ದು, ಅ.11ರಂದು ಬೆಳಗ್ಗೆ 10ಗಂಟೆಗೆ ಮರವಂತೆಯ ಮಾಕ್ಸಿಮಾ ಡಿಸಿಲ್ವ ಎಂಬವರ ತೆಂಗಿನ ತೋಟದಲ್ಲಿ ಹೋಗುತ್ತಿದ್ದಾಗ ಬ್ಯಾಂಡೇಜ್ ಹಾಕಿದ ಇವರ ಕಾಲು ಶಿಲೆ ಕಲ್ಲು ಕಂಬದಲ್ಲಿ ಸಿಕ್ಕಿಹಾಕಿಕೊಂಡಿತ್ತೆನ್ನಲಾಗಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ಅವರು ಅಲ್ಲಿಯೇ ಬೇಲಿಯ ಕಂಬಕ್ಕೆ ಒರಗಿ ಕುಳಿತಿದ್ದು, ಮಧ್ಯಾಹ್ನ 12:30ರ ಸುಮಾರಿಗೆ ಮೃತಪಟ್ಟಿರುವುದು ಕಂಡು ಬಂದಿದೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News