ವಿಟ್ಲ: ಟಿಪ್ಪರ್ ಚಾಲಕನಿಗೆ ಅಪರಿಚಿತ ತಂಡದಿಂದ ಹಲ್ಲೆ

Update: 2019-10-12 16:57 GMT

ವಿಟ್ಲ : ಟಿಪ್ಪರ್ ಲಾರಿ ಚಾಲಕನೋರ್ವನಿಗೆ ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತರಿಬ್ಬರು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಘಟನೆ ಉಕ್ಕುಡ ಸಮೀಪ ನಡೆದಿದೆ.

ಕಲ್ಲಡ್ಕ ಉಳ್ಯಾ ನಿವಾಸಿ ಗಣೇಶ್ (32) ಹಲ್ಲೆಗೊಳಲಾದ ಟಿಪ್ಪರ್ ಚಾಲಕ ಎಂದು ತಿಳಿದು ಬಂದಿದೆ.

ಕೇರಳ ಮೂಲದ ಟಿಪ್ಪರ್ ಲಾರಿಯು ಕನ್ಯಾನ ಕಡೆಯಿಂದ ಉಕ್ಕುಡ ಮೂಲಕ ಅಡ್ಯನಡ್ಕ ಭಾಗಕ್ಕೆ ಚಲಾಯಿಸಿಕೊಂಡು ಹೋಗುವ ವೇಳೆ ಉಕ್ಕುಡ ಕಡೆಯಿಂದ ಬಂದ ದ್ವಿಚಕ್ರ ವಾಹನವೊಂದು ಟಿಪ್ಪರ್‌ಗೆ ಅಡ್ಡಲಾಗಿ ನಿಲ್ಲಿಸಿ, ಇದರಲ್ಲಿದ್ದ ಅಪರಿಚಿತರಿಬ್ಬರು ಚಾಲಕನಿಗೆ ಹಲ್ಲೆ ನಡೆಸಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News