ತಂಡಗಳ ಮಧ್ಯೆ ಹೊಡೆದಾಟ: ಎಂಟು ಮಂದಿ ಸೆರೆ
Update: 2019-10-12 17:08 GMT
ವಿಟ್ಲ, ಅ. 12: ವಿಟ್ಲ ನಾಲ್ಕು ಮಾರ್ಗ ಜಂಕ್ಷನ್ನಲ್ಲಿ ಅಕ್ರಮವಾಗಿ ಸೇರಿ ಶಾಂತಿ ಕದಡುವ ರೀತಿಯಲ್ಲಿ ಜಗಳವಾಡುತ್ತಿದ್ದ ಎಂಟು ಮಂದಿಯನ್ನು ವಿಟ್ಲ ಪೊಲೀಸರು ಬಂಧಿಸಿ ಸ್ವಪ್ರಕರಣ ದಾಖಲಿಸಿಕೊಂಡ ಘಟನೆ ಶನಿವಾರ ನಡೆದಿದೆ.
ಸ್ಥಳೀಯರಾದ ರವಿ, ರಾಜೇಶ್, ಸುಶಾಂತ್ ಪ್ರಕಾಶ್, ಗಣೇಶ್, ಮನ್ಮಥ, ಪ್ರಶಾಂತ್ ಕುಮಾರ್, ಸುನಿಲ್ ಕುಮಾರ್ ಬಂಧಿತರು.
ವಿಟ್ಲ ಪೇಟೆಯ ಜಂಕ್ಷನ್ನಲ್ಲಿ ಕೆಲ ಯುವಕರು ಶಾಂತಿ ಕದಡುವ ರೀತಿಯಲ್ಲಿ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಎಸ್ಸೈ ಯಲ್ಲಪ್ಪ ಅವರ ನೇತೃತ್ವದ ತಂಡ ಎಂಟು ಮಂದಿಯನ್ನು ವಶಕ್ಕೆ ಪಡೆದುಕೊಂಡಿದೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಸ್ವಪ್ರಕರಣ ದಾಖಲಿಸಿಕೊಳ್ಳಲಾಗಿದೆ.