ಕಾಮ್ರೇಡ್ ಉಮೇಶ್ ಶ್ರೀಯಾನ್‌ಗೆ ಶ್ರದ್ಧಾಂಜಲಿ

Update: 2019-10-13 14:44 GMT

ಮಂಗಳೂರು, ಅ.13: ಸುಮಾರು 70-80 ದಶಕದಲ್ಲಿ ಬಡ ಕಾರ್ಮಿಕರನ್ನು ಸಂಘಟಿಸಿ, ಬದುಕಿಗೆ ನೆಲೆ ಕಲ್ಪಿಸಲು ನಿರಂತರ ದುಡಿದ ಕಾರ್ಮಿಕ ಮುಖಂಡ ಉಮೇಶ್ ಶ್ರೀಯಾನ್‌ರ ನಿಧನವು ತುಂಬಲಾರದ ನಷ್ಟವಾಗಿದೆ ಎಂದು ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ ಹೇಳಿದರು.

ಡಿವೈಎಫ್‌ಐ ಉರ್ವಸ್ಟೋರ್ ಘಟಕದ ನೇತೃತ್ವದಿಂದ ಉರ್ವಸ್ಟೋರ್ ಸುಂಕದಕಟ್ಟೆಯಲ್ಲಿ ರವಿವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಕೆ. ಪ್ರಕಾಶ್ ವಹಿಸಿದ್ದರು.

ಸಿಐಟಿಯು ಮುಖಂಡರಾದ ಅಶೋಕ್ ಶ್ರೀಯಾನ್, ಸಾಮ್ಯುವೆಲ್ ಟೈಟಸ್, ಪ್ರಶಾಂತ್ ಎಂಬಿ, ಮನೋಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News