ಕಡ್ತಲ ಸಾಧಕರಿಗೆ ವಿಜಯದಶಮಿ ಗೌರವ ಪ್ರದಾನ

Update: 2019-10-13 15:40 GMT

ಹೆಬ್ರಿ, ಅ.13: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮೂವರು ಸಾಧಕರು ಮತ್ತು ಒಂದು ಸಂಸ್ಥೆಗೆ ಕಡ್ತಲ ಗ್ರಾಮದ ಸಿರಿ ಬೈಲು ಶ್ರೀ ದುರ್ಗಾಪರಮೇಶ್ವರಿ ಮತ್ತು ಬರ್ಬರೇಶ್ವರ ದೇವಸ್ಥಾನದ ವಾರ್ಷಿಕ ವಿಜಯ ದಶಮಿ ಗೌರವವನ್ನು ಪುಣೆಯ ಉದ್ಯಮಿ ವಿಶ್ವನಾಥ ಪೂಜಾರಿ ಪ್ರದಾನ ಮಾಡಿದರು.

ಪತ್ರಕರ್ತ ಡಾ.ಶೇಖರ ಅಜೆಕಾರು, ಚಿತ್ರನಟ ಉಮೇಶ ಮಿಜಾರು, ಯುವ ಪ್ರಗತಿಪರ ಕೃಷಿ ಭೋಜ ನಾಯ್ಕ, ಗಾಂಧಿಗ್ರಾಮ ಪ್ರಶಸ್ತಿ ಪುರಸ್ಕೃತ ಕಡ್ತಲ ಗ್ರಾಪಂ ಪರವಾಗಿ ಅಧ್ಯಕ್ಷ ಅರುಣ್ ಹೆಗ್ಡೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಆಡಳಿತ ಮೊಕ್ತೆಸರ ಪ್ರಶಾಂತ ಬೆಳಿರಾಯ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಕಡ್ತಲ ವಿಶ್ವನಾಥ ಪೂಜಾರಿ ಪೂನಾ, ಉಮೇಶ ಹೆಗ್ಡೆ ಮಾಣಿಬೆಟ್ಟು, ಗುಲಾಬಿ ಪೂಜಾರಿ, ಸಂಜೀವ ಪೂಜಾರಿ ಕುಂಟಿಬೆಟ್ಟು ಮುಖ್ಯ ಅತಿಥಿಗಳಾಗಿದ್ದರು. ಯೋಗಪಟು, ಶಿಕ್ಷಕ ಶೇಖರ ಕಡ್ತಲ ಕಾರ್ಯಕ್ರಮ ನಿರೂಪಿಸಿ ದರು. ಬಳಿಕ ಬೆದ್ರ ತಂಡದ ನೂತನ ನಾಟಕ ಕುಸಲ್ದ ಗೊಬ್ಬು ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News