ಬೈಕ್ ಢಿಕ್ಕಿ: ಸ್ಕೂಟಿ ಸವಾರ ಮೃತ್ಯು

Update: 2019-10-13 16:16 GMT

ಕಾರ್ಕಳ, ಅ.13: ಸ್ಕೂಟಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಮೃತಪಟ್ಟ ಘಟನೆ ಅ.13ರಂದು ಮಧ್ಯಾಹ್ನ 12ಗಂಟೆ ಸುಮಾರಿಗೆ ಬೆಳ್ಮಣ್ ಸಮೀಪ ನಡೆದಿದೆ.

ಮೃತರನ್ನು ನಿಟ್ಟೆಯ ಮದನಾಡು ನಿವಾಸಿ ಅಶ್ವಿತ್(24) ಎಂದು ಗುರು ತಿಸಲಾಗಿದೆ. ತನ್ನ ಪತ್ನಿ ಜೊತೆ ನಿಟ್ಟೆ ಕಡೆಯಿಂದ ಪಡುಬಿದ್ರೆ ಕಡೆಗೆ ಹೋಗುತ್ತಿದ್ದ ಇವರ ಸ್ಕೂಟಿಗೆ ಪಡುಬಿದ್ರೆ ಕಡೆಯಿಂದ ನಿಟ್ಟೆ ಕಡೆಗೆ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆಯಿತು. ಇದರಿಂದ ಸ್ಕೂಟಿ ಅದೇ ದಿಕ್ಕಿಗೆ ಹೋಗುತ್ತಿದ್ದ ಬಸ್ಸಿನ ಹಿಂಭಾಗ ಚಕ್ರದ ಟಯರಿಗೆ ತಾಗಿ ರಸ್ತೆಯಲ್ಲಿ ಬಿತ್ತೆನ್ನಲಾಗಿದೆ.

 ಅಪಘಾತದಿಂದ ಗಂಭೀರವಾಗಿ ಗಾಯಗೊಂಡ ಅಶ್ವಿತ್ ಸ್ಥಳದಲ್ಲೇ ಮೃತ ಪಟ್ಟರೆಂದು ತಿಳಿದುಬಂದಿದೆ. ಆದರೆ ಹಿಂಬದಿಯಲ್ಲಿದ್ದ ಅವರ ಪತ್ನಿ ಅಕ್ಷಿತಾ ಅವರಿಗೆ ಯಾವುದೇ ಗಾಯಗಳಾಗಿಲ್ಲ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News