ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣದೊಂದಿಗೆ ಕೆಲಸದಾಳು ಪರಾರಿ

Update: 2019-10-13 16:21 GMT

ಮಣಿಪಾಲ, ಅ.13: ಮನೆಯ ಕೆಲಸದಾಳು ಲಕ್ಷಾಂತರ ರೂ. ಹಣ ಕಳವು ಮಾಡಿ ಪರಾರಿಯಾಗಿರುವ ಘಟನೆ ಮಣಿಪಾ ಈಶ್ವರನಗರ ಎಂಬಲ್ಲಿ ನಡೆದಿದೆ.

ಈಶ್ವರನಗರದ ಡಾ.ಶೋಭ ಕಾಮತ್ ಎಂಬವರ ಮನೆಯಲ್ಲಿ ಆ.18ರಿಂದ ಅ.1ರ ಮಧ್ಯಾವಧಿಯಲ್ಲಿ ಕೆಲಸ ಮಾಡಿಕೊಂಡಿದ್ದ ಕೆಲಸದಾಳು ಪ್ರೇಮಾ ಲಂಬಾಣಿ(21) ಎಂಬಾಕೆ ಮನೆಯಲ್ಲಿಟ್ಟಿದ್ದ 250 ಗ್ರಾಂ ತೂಕದ 8,75,000 ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News