ಉಬರಡ್ಕ: ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು
Update: 2019-10-13 17:28 GMT
ಮಂಗಳೂರು: ಸ್ನಾನಕ್ಕೆಂದು ನದಿಗೆ ಇಳಿದ ನಾಲ್ವರಲ್ಲಿ ಓರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಉಬರಡ್ಕದಿಂದ ರವಿವಾರ ವರದಿಯಾಗಿದೆ.
ದುಗಲಡ್ಕ ಬಳಿಯ ಕಮಿಲಡ್ಕದ ರಿಕ್ಷಾ ಚಾಲಕ ಹರೀಶ್ ಗೌಡ ಎಂಬವರ ಪುತ್ರ ಯಶ್ವಿತ್ ಮೃತ ಬಾಲಕ. ಈತ ಸುಳ್ಯ ಜೂನಿಯರ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದ.
ಇಂದು ಮಧ್ಯಾಹ್ನ ಇತರ ಮೂವರೊಂದಿಗೆ ಸ್ನಾನಕ್ಕೆಂದು ಉಬರಡ್ಕ ಹೊಳೆಗೆ ಹೋಗಿದ್ದು, ನೀರಿನಲ್ಲಿ ಸ್ನಾನ ಮಾಡುತ್ತಿದ್ದಾಗ ಯಶ್ವಿತ್ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.