ಚಿನ್ನದ ಸರ ಕಸಿದು ಪರಾರಿ

Update: 2019-10-14 15:11 GMT

ಮಂಗಳೂರು, ಅ.14: ನಗರದ ಅಶೋಕನಗರದಲ್ಲಿ ರವಿವಾರ ಸಂಜೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಕಸಿದು ಪರಾರಿಯಾದ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉರ್ವ ಅಶೋಕನಗರ ನಿವಾಸಿ ಪುಷ್ಪಲತಾ (68) ಮತ್ತು ಸುಮಿತ್ರಾ (68) ಎಂಬವರು ಸಂಜೆ 6ಗಂಟೆಯ ವೇಳೆ ಅಶೋಕನಗರ ಧನ್ವಂತರಿ ಹಾಸ್ಟೆಲ್ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಹಾಸ್ಟೆಲ್ ಬಳಿ ಬೈಕನ್ನು ತಿರುಗಿಸಿ ಮಹಿಳೆಯರ ಎದುರಿನಿಂದ ಬಂದು ಪುಷ್ಪಲತಾ ಅವರ ಕುತ್ತಿಗೆಗೆ ಕೈ ಹಾಕಿ 4 ಪವನ್ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ಘಟನೆ ವೇಳೆ ಸುಮಿತ್ರಾ ಕೆಳಗೆ ಬಿದ್ದಿದ್ದು ತರಚಿದ ಗಾಯವಾಗಿದೆ. ಏಕಾಏಕಿ ನಡೆದ ಈ ಕೃತ್ಯದಿಂದ ಆಘಾತಕ್ಕೀಡಾದ ಮಹಿಳೆಯರು ಹೆದರಿ ಬೊಬ್ಬೆ ಹಾಕಿದರೂ ಅಲ್ಲಿ ಯಾರೂ ಇಲ್ಲದ ಕಾರಣ ಆರೋಪಿಗಳನ್ನು ಗುರುತಿಸಲು ಅಥವಾ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News