ಮಣಿಪಾಲ: ಸಂಸ್ಕೃತ ಪಾಠ್ಯ ಪುಸ್ತಕ ಬಿಡುಗಡೆ

Update: 2019-10-14 15:54 GMT

ಮಣಿಪಾಲ, ಅ.14: ಮುನಿಯಾಲ್ ಆಯುರ್ವೇದ ಕಾಲೇಜಿನ ಸಂಸೃತ ಪ್ರಾಧ್ಯಾಪಕ ಪ್ರೊ.ಹೆರ್ಗ ಹರಿಪ್ರಸಾದ ಭಟ್ ರಚಿಸಿದ ಪ್ರಥಮ ವರ್ಷದ ಆಯುರ್ವೇದ ವಿದ್ಯಾರ್ಥಿಗಳ ಸಂಸ್ಕೃತ ಪಾಠ್ಯ ಪುಸ್ತಕದ ಮೂರನೇ ಆವೃತ್ತಿಯ ಬಿಡುಗಡೆ ಸಮಾರಂಭವು ಅ.14ರಂದು ನಡೆಯಿತು.

ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ಪ್ರಾಂಶುಪಾಲ ಡಾ. ಸತ್ಯನಾರಾಯಣ ಬಿ. ಪುಸ್ತಕವನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಉಪಪ್ರಾಂಶುಪಾಲ ಡಾ.ಚಂದ್ರಕಾಂತ ಭಟ್, ಸಂಸೃತ ಪ್ರಾಧ್ಯಾಪಕ ಪ್ರೊ. ಹೆರ್ಗ ಹರಿಪ್ರಸಾದ ಭಟ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News