ಕಾಶ್ಮೀರ: ಉಗ್ರರಿಂದ ಟ್ರಕ್ ಚಾಲಕನ ಹತ್ಯೆ
Update: 2019-10-14 18:10 GMT
ಶ್ರೀನಗರ, ಅ. 14: ಜಮ್ಮು ಹಾಗೂ ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಪಾಕಿಸ್ತಾನದ ಪ್ರಜೆ ಸಹಿತ ಇಬ್ಬರು ಭಯೋತ್ಪಾದಕರು ಸೋಮವಾರ ರಾಜಸ್ಥಾನದ ಟ್ರಕ್ ಚಾಲಕನೋರ್ವನನ್ನು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ, ಹಣ್ಣಿನ ತೋಟದ ಮಾಲಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮೃತಪಟ್ಟ ಚಾಲಕನನ್ನು ಶರೀಫ್ ಖಾನ್ ಎಂದು ಗುರುತಿಸಲಾಗಿದೆ. ಜಮ್ಮು ಹಾಗೂ ಕಾಶ್ಮೀರದಲ್ಲಿ ಹಣ್ಣಿನ ಸಾಗಾಟ ಆರಂಭವಾಗಿರುವುದರಿಂದ ಹತಾಶರಾಗಿ ಉಗ್ರರು ಶಿರ್ಮಲ್ ಗ್ರಾಮದಲ್ಲಿ ಈ ದಾಳಿ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.