ಮಾಜಿ ಸಚಿವರ ನಿರ್ಧಾರಕ್ಕೆ ಸ್ವಾಗತ: ಹಾಶೀರ್ ಪೆರಿಮಾರ್

Update: 2019-10-15 13:28 GMT

ಬಂಟ್ವಾಳ : ಜನರ ಅನುಕೂಲದ ದೃಷ್ಠಿಯಿಂದ ನೂತನ ಉಳ್ಳಾಲ ತಾಲೂಕಿಗೆ ಸೇರ್ಪಡೆಯಿಂದ ಪುದು, ಮೇರಮಜಲು, ತುಂಬೆ ಗ್ರಾಪಂನ್ನು ಕೈಬಿಟ್ಟಿರುವ ನಿರ್ಧಾರವನ್ನು ಪುದು ಗ್ರಾಮ ಪಂಚಾಯತ್ ಸದಸ್ಯ ಹಾಶೀರ್ ಪೆರಿಮಾರ್ ಸ್ವಾಗತಿಸಿದ್ದಾರೆ.

ಬಂಟ್ವಾಳ ತಾಲೂಕಿನ ಮೂರು ಗ್ರಾಪಂಗಳ ಜನರಿಗೆ ತೊಂದರೆಯಾಗಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಮುಖರ ನಿಯೋಗ ಮಾಜಿ ಜಿಪಂ ಸದಸ್ಯ ಫಾರೂಕ್ ನೇತೃತ್ವದಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಪ್ರತ್ಯೇಕವಾಗಿ ಮನವಿ ಸಲ್ಲಿಸಿತ್ತು.

ಇದೀಗ ಉಳ್ಳಾಲ ತಾಲೂಕನ್ನು ಘೋಷಣೆಯಲ್ಲಿ ಬಂಟ್ವಾಳ ತಾಲೂಕಿನ ನಾಲ್ಕು ಗ್ರಾಮಗಳನ್ನು (ಮೂರು ಗ್ರಾಮ ಪಂಚಾಯತ್) ವ್ಯಾಪ್ತಿಗೆ ಮುಕ್ತಿ ನೀಡಿ, ಉಳ್ಳಾಲ ತಾಲೂಕು ರಚನೆಗೆ ಯೋಜನೆ ಸಿದ್ದಗೊಳ್ಳುತ್ತಿದೆ. ನಮ್ಮ ಮನವಿಯನ್ನು ಪುರಸ್ಕರಿಸಿ ಈ ತೀರ್ಮಾನ ತೆಗೆದುಕೊಂಡಿರುವ ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ, ಶಾಸಕ ಯು.ಟಿ.ಖಾದರ್ ಅವರಿಗೆ ಕೃತಜ್ಞತೆಗಳು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News