ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ರಹೀಂ ಉಚ್ಚಿಲ ಆಯ್ಕೆ
Update: 2019-10-15 14:38 GMT
ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರನ್ನಾಗಿ ರಹೀಂ ಉಚ್ಚಿಲ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿ ಮಂಗಳವಾರ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಸದಸ್ಯರುಗಳಾಗಿ ರೂಪೇಶ್ ಕುಮಾರ್, ಮುರಳಿ ರಾಜ್, ಡಾ. ಮುನೀರ್ ಬಾವ, ಸುರೇಖ, ಚಂಚಲಾಕ್ಷಿ, ಫಸಲ್ ಅಸೈಗೋಳಿ, ಸಿರಾಜ್ ಮುಡಿಪು ಆಯ್ಕೆಯಾಗಿದ್ದಾರೆ.