ನಂಬಿಸಿ ಹಣ ವಂಚನೆ: ದೂರು

Update: 2019-10-15 16:48 GMT

ಉಡುಪಿ, ಅ.15: ಎಂಟಿಎಲ್‌ನ ಸಿಇಓ ಎಂಬುದಾಗಿ ನಂಬಿಸಿ ಹಮ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ವ್ಯಕ್ತಿಯೊಬ್ಬ ಎಂಟಿಎಲ್‌ನ ಸಿಇಒ ಅಭಯ್ ಗುಪ್ತ ಎಂಬುದಾಗಿ ಹೇಳಿಕೊಂಡು ಅ.9ರಂದು ಪೆರ್ಡೂರು ಬಾಳೆಬೈಲುವಿನ ಅನಂತ ಪೈ(37) ಎಂಬವರಿಗೆ ಇ ಮೇಲ್ಗಳನ್ನು ರವಾನಿಸುವುದರ ಮೂಲಕ ನಂಬಿಸಿ, ಪಡೆದ 33,890 ರೂ. ಹಣವನ್ನು ಮರುಪಾವತಿಸದೆ ವಂಚಿಸಿ ರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News