ಯುವಕ ಸಂಶಯಾಸ್ಪದ ಸಾವು

Update: 2019-10-15 16:50 GMT

ಶಿರ್ವ, ಅ.15: ಭತ್ತದ ಕಟಾವು ಕೆಲಸಕ್ಕೆ ಬಂದಿದ್ದ ಯುವಕನೊರ್ವ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಅ.14ರಂದು ಬೆಳಗ್ಗೆ ಬೆಳ್ಳೆ ಗ್ರಾಮದ ಹಾಡಿಯಲ್ಲಿ ನಡೆದಿದೆ.

ಮೃತರನ್ನು ವೇಣುಗೋಪಾಲ್(18) ಎಂದು ಗುರುತಿಸಲಾಗಿದೆ. ಬೆಳ್ಳೆ ಗ್ರಾಮದ ಲೀನಾ ಡಿ ಅಲ್ಮೇಡಾ ಎಂಬವರ ಗದ್ದೆಯ ಭತ್ತ ಕಟಾವು ಮಾಡಲು ವೇಣುಗೋಪಾಲ ಹಾಗೂ ಅರವಿಂದ ಬಂದಿದ್ದು, ಈ ವೇಳೆ ಅಲ್ಲೇ ಸಮೀಪದ ಹಾಡಿಯಲ್ಲಿ ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿದ ಸ್ಥಿತಿಯಲ್ಲಿ ವೇಣುಗೋಪಾಲ್ ಪತ್ತೆಯಾಗಿದ್ದನು. ಆತ ಜೀವಂತ ಇರಬಹು ದೆಂಬ ಶಂಕೆಯಲ್ಲಿ ಮೃತದೇಹವನ್ನು ಸ್ಥಳದಿಂದ ಹೊತ್ತುಕೊಂಡು ಬಂದು ರಸ್ತೆಯ ಬಳಿ ಹಾಕಿರುವುದಾಗಿ ಅರವಿಂದ ಹೇಳಿದ್ದಾನೆ ಎನ್ನಲಾಗಿದೆ. ವೇಣು ಗೋಪಾಲ್ ಮರಣದಲ್ಲಿ ಸಂಶವಿರುವುದಾಗಿ ರಫೇಲ್ ಡಿಸೋಜ ನೀಡಿರುವ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News