ಉಡುಪಿ: 250 ಮಂದಿಗೆ ವಿದ್ಯಾರ್ಥಿ ವೇತನ ವಿತರಣೆ

Update: 2019-10-16 14:24 GMT

ಉಡುಪಿ, ಅ.16: ಶ್ರೀರಾಮ್ ಫೌಂಡೇಶನ್ ಮತ್ತು ಶ್ರೀರಾಮ್ ಟ್ರಾನ್ಸ್ ಫೋರ್ಟ್ ಮತ್ತು ಫೈನಾನ್ಸ್ ಕಂಪೆನಿಯ ವತಿಯಿಂದ ಸುಮಾರು 250ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಮಂಗಳವಾರ ಉಡುಪಿ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ವಿತರಿಸಲಾಯಿತು.

ಕಾರ್ಯಕ್ರಮವನ್ನು ಉಡುಪಿ ಡಿವೈಎಸ್ಪಿ ಜೈಶಂಕರ್ ಉದ್ಘಾಟಿಸಿದರು. ಶ್ರೀ ರಾಮ್ ಟ್ರಾನ್ಸ್‌ಫೋರ್ಟ್ ಪೈನಾನ್ಸ್ ಕಂಪೆನಿಯ ಪ್ರಧಾನ ವ್ಯವಸ್ಥಾಪಕ ಶರಶ್ಚಂದ್ರ ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ವಕೀಲರ ಸಂಘದ ಕಾರ್ಯದರ್ಶಿ ರೆನಾಲ್ಡ್ ಪ್ರವೀಣ್ ಕುಮಾರ್, ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್, ಅಲೆವೂರು ಗ್ರೂಫ್ ಫಾರ್ ಎಜ್ಯುಕೇಶನ್‌ನ ಕೋಶಾಧಿಕಾರಿ ಅಲೆವೂರು ಹರೀಶ್ ಕಿಣಿ, ಸ್ನೇಹ ಟುಟೋ ರಿಯಲ್‌ನ ಮುಖ್ಯಸ್ಥ ಉಮೇಶ್ ನಾಯ್ಕಾ, ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ಟ್ಯಾಕ್ಸಿಮೆನ್ ಅಸೋಸಿಯೇಶನ್‌ನ ಜಿಲ್ಲಾ ಕಾರ್ಯದರ್ಶಿ ರಮೇಶ್ ಕೋಟಿಯಾನ್, ಮಲ್ಪೆ ಗೂಡ್ಸ್‌ಟೆಂಪೋ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ಪ್ರಶಾಂತ್ ನೇಜಾರ್, ಕಾಪು ಅಧ್ಯಕ್ಷ ಶೇಕ್ ನಜೀರ್ ಕಾಪು, ಶಿರ್ವ ಅಧ್ಯಕ್ಷ ಗಿರಿಧರ್ ಪ್ರಭು ಮೊದಲಾದವರು ಉಪಸ್ಥಿತರಿದ್ದರು.

ಪ್ರಾದೇಶಿಕ ವ್ಯವಹಾರ ಮುಖ್ಯಸ್ಥ ಸದಾಶಿವ ಅಮೀನ್ ಸ್ವಾಗತಿಸಿದರು. ಪ್ರಾದೇಶಿಕ ಕಲೆಕ್ಷನ್ ಮುಖ್ಯಸ್ಥ ಚೇತನ್ ಅರಸ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News